ರಾಜ್ಯವನ್ನು ” ಬರಗಾಲ ಪೀಡಿತ ಪ್ರದೇಶ ” ಎಂದು ಘೋಷಿಸಲು, ಯಡಿಯೂರಪ್ಪ ಆಗ್ರಹ

ರಾಜ್ಯವನ್ನು " ಬರಗಾಲ ಪೀಡಿತ ಪ್ರದೇಶ " ಎಂದು ಘೋಷಿಸಲು, ಯಡಿಯೂರಪ್ಪ ಆಗ್ರಹ

ದಾವಣಗೆರೆ: ಸರ್ಕಾರ ರಾಜ್ಯವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಬುಧವಾರ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಹುಟ್ಟುಹಬ್ಬದ ಆಚರಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಮಳೆ ಬಾರದ ಪರಿಣಾಮ. ಬಿತ್ತನೆ‌ ಇನ್ನೂ ಆರಂಭವಾಗಿಲ್ಲ. ಹಾಗಾಗಿ ಸರ್ಕಾರ ಕೂಡಲೇ‌ ಬರಗಾಲ ಪೀಡಿತ‌ ಪ್ರದೇಶವೆಂದು ಘೋಷಣೆ ಮಾಡಬೇಕು‌ ಎಂದು ಒತ್ತಾಯಿಸಿದರು. ರೈತರಿಗೆ ಅನ್ಯಾಯವಾಗಬಾರದು, ಸರ್ಕಾರ ಆದಷ್ಟು ಬೇಗನೆ ಬರಪೀಡಿತ ಪ್ರದೇಶ ಎಂದು ಘೋಷಿಸಲಿ ಎಂದು ಯಡಿಯೂರಪ್ಪ ಹೇಳಿದರು.

Leave a Reply

Your email address will not be published. Required fields are marked *

error: Content is protected !!