ಸಮಾಜ ಸೇವಕ ಆನಂದ್ ಅವರ ಹುಟ್ಟುಹಬ್ಬ ಸರಳವಾಗಿ ಆಚರಣೆ

ಸಮಾಜ ಸೇವಕ ಆನಂದ್ ಅವರ ಹುಟ್ಟುಹಬ್ಬ ಸರಳವಾಗಿ ಆಚರಣೆ

ದಾವಣಗೆರೆ : ಉದ್ಯಮಿಯಾದರೂ ಬಡವರ ಬಗ್ಗೆ ಕಾಳಜಿ ಹೊಂದಿದ್ದು ದುಡಿದ ಹಣದಲ್ಲೇ ಸಮಾಜ ಸೇವೆ ಮಾಡುತ್ತಿರುವ ಎಂ ಆನಂದ್ ಇಂದಿನ ಯುವಕರಿಗೆ ಮಾದರಿ ಎಂದು ಜಿಲ್ಲಾ ಶೋಷಿತ ವರ್ಗಗಳ ಒಕ್ಕೂಟ ಮುಖಂಡರಾದ ಬಾಡದ ಆನಂದರಾಜು ತಿಳಿಸಿದರು.

ವಿದ್ಯಾನಗರದ ಗಾಂಧಿ ವೃತ್ತದಲ್ಲಿ ಹೃದಯವಂತರ ಬಳಗದ ವತಿಯಿಂದ ಎಂ ಆನಂದ್ ಹುಟ್ಟುಹಬ್ಬವನ್ನ ಕೇಕ್ ಕತ್ತರಿಸಿ ಸರಳವಾಗಿ ಅಚರಣೆ ಮಾಡಿದ ಹೃದಯವಂತರ ಬಳಗ ಶುಭ ಕೋರಿತು. ಕೋವಿಡ್ ಹಾಗೂ ಬರಗಾಲ ಸಂದರ್ಭದಲ್ಲಿ ಆನಂದ್ ಅವರು ನೀರು ಸರಬರಾಜು ಹಾಗೂ ಆಹಾರ ಧಾನ್ಯದ ಕಿಟ್ ವಿತರಣೆ ಮಾಡಿ ಅಶಕ್ತರಿಗೆ ನೆರವಾಗಿದ್ದರು. ಕೆಲವರಿಗೆ ಆರ್ಥಿಕ ಸಹಾಯ ಕೂಡ ಮಾಡಿದ್ದರು.

ಕಷ್ಟ ಎಂದು ಬಂದರೆ ಸಹಾಯ ಮಾಡುವ ಗುಣ ಅವರಲ್ಲಿದೆ ಆನಂದ್ ಇಂದಿನ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು. ತಾನು ದುಡಿದ ಹಣದಲ್ಲೇ ಇತರರಿಗೆ ನೆರವಾಗುತ್ತಿದ್ದಾರೆ ಇಂದಿಗೂ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ ದಾವಣಗೆರೆಯಲ್ಲಿರುವ ದಾನಿಗಳ ಹೆಸರಲ್ಲಿ ಇವರು ಸಹ ಒಬ್ಬರು ಎಂದರು. ಸಣ್ಣವರೇ ಆಗಲಿ ಹಿರಿಯರೇ ಆಗಲಿ ಗೌರವದಿಂದ ನಡೆದುಕೊಳ್ಳುವುದು ಆನಂದ್ ಅವರ ದೊಡ್ಡಗುಣ ಎಂದರು. ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೂ ನೆರವಾಗುವ ಮೂಲಕ ಅವರ ಭವಿಷ್ಯಕ್ಕೆ ಸಹಕಾರಿಯಾಗಿದ್ದಾರೆ.

ಇವರ ಹುಟ್ಟುಹಬ್ಬ ಹಿನ್ನೆಲೆ ಗೆಳೆಯರ ಬಳಗ ಶುಭ ಕೋರಿದ್ದು ಮುಂದೆಯೇ ಇದೇ ರೀತಿ ಸಮಾಜ ಸೇವೆ ಮಾಡಿ ಉತ್ತುಂಗ ಸ್ಥಾನ ಪಡೆಯಲಿ ಎಂದು ಬಾಡದ ಆನಂದರಾಜು ಹಾರೈಸಿದರು.ಈ ಸಂದರ್ಭದಲ್ಲಿ ಬಿಜೆಪಿ ಪರಾಜಿತ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಮಾಜಿ ಮಹಾಪೌರ ಎಸ್.ಟಿ.ವಿರೇಶ್ ಮಾಯಾಕೊಂಡ ಬಿಜೆಪಿ ಯುವ ನಾಯಕ ಜಿಎಸ್.ಶ್ಯಾಮ್.ಎಸ್ಪಿ ಶ್ರೀನಿವಾಸ್ ಅಮರೇಶ್.ಹನುಮೇಗೌಡ ಮುರುಳಿ ಯಾದವ್.ಶಂಕರ್.ಯಲವಟ್ಟಿ ಉಮೇಶ್ ದನ್ಯಕುಮಾರ್ ನಾಗರಾಜ್ ನಾಯ್ಕ್ ಇನ್ನೂ ಮುಂತಾದವರಿದ್ದರು.

Leave a Reply

Your email address will not be published. Required fields are marked *

error: Content is protected !!