ದಾವಣಗೆರೆ

Trust: ಹರಿಹರ ಪಂಚಮಸಾಲಿ ಪೀಠದಲ್ಲಿ ಕಿಚ್ಚು: ಲೆಕ್ಕ ಕೊಟ್ಟು ಮಠಕ್ಕೆ ಕಾಲಿಡಿ ಎಂದು ಟ್ರಸ್ಟಿಗಳಿಗೆ ಹೆಚ್ ಎಸ್ ಶಿವಶಂಕರ್ ಎಚ್ಚರಿಕೆ!

Share
Share

ದಾವಣಗೆರೆ:(Trust)” ಮಠದ ಆಸ್ತಿ ಮತ್ತು ಹಣಕ್ಕೆ ಲೆಕ್ಕ ಕೇಳುವ ಹಕ್ಕು ಸಮಾಜದ ಪ್ರತಿಯೊಬ್ಬರಿಗೂ ಇದೆ. ಲೆಕ್ಕ ಕೊಡದ ಟ್ರಸ್ಟಿಗಳಿಗೆ ಮಠದೊಳಗೆ ಪ್ರವೇಶವಿಲ್ಲ” ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಗುಡುಗಿದ್ದಾರೆ.

ಹರಿಹರದ ಪಂಚಮಸಾಲಿ ಗುರುಪೀಠದಲ್ಲಿ ಆಯೋಜಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಠದ ಟ್ರಸ್ಟಿಗಳ ಸರ್ವಾಧಿಕಾರಿ ಧೋರಣೆ ಹಾಗೂ ವಚನಾನಂದ ಶ್ರೀಗಳ ಉಚ್ಚಾಟನೆ ವಿಚಾರವಾಗಿ ಸುದೀರ್ಘವಾಗಿ ಕಿಡಿಕಾರಿದರು.

ವರದಿಯ ಪ್ರಮುಖ ಅಂಶಗಳು:

1. ಚಪ್ಪಲಿ ಏಟು ತಿನ್ನುವ ಸ್ಥಿತಿ ಬರದಿರಲಿ.!

“ಮೊನ್ನೆ ಮಠಕ್ಕೆ ಟ್ರಸ್ಟಿಗಳು ಕಳ್ಳರ ರೀತಿ ಪೊಲೀಸ್ ಭದ್ರತೆಯಲ್ಲಿ ಬಂದು ಹೋಗಿದ್ದೀರಿ. ಸಮಾಜದ ಜನರು ಚಪ್ಪಲಿ ತೋರಿಸಿದಾಗಲೇ ನಿಮಗೆ ಬುದ್ಧಿ ಬರಬೇಕಿತ್ತು. ಜನರ ಆಕ್ರೋಶಕ್ಕೆ ಗುರಿಯಾಗಿ ಇಂತಹ ಜೀವನ ನಡೆಸುವ ಬದಲು ಗೌರವಯುತವಾಗಿ ಲೆಕ್ಕ ಒಪ್ಪಿಸಿ” ಎಂದು ಟ್ರಸ್ಟಿಗಳ ವಿರುದ್ಧ ಹರಿಹಾಯ್ದರು.

2. ಸ್ವಾಮೀಜಿ ಕುರಿಯಾಗಿದ್ದಾರೆ, ಟ್ರಸ್ಟಿಗಳು ತೋಳಗಳು!

“ವಚನಾನಂದ ಶ್ರೀಗಳು ಮಠಕ್ಕೆ ಬರುವ ಮೊದಲೇ ನಾನು ಎಚ್ಚರಿಸಿದ್ದೆ. ತೋಳಗಳ ಗುಂಪಿಗೆ ಕುರಿ ಬಂದಂತಾಗುತ್ತದೆ ಎಂದು ಹೇಳಿದ್ದೆ. ಇಂದು ಟ್ರಸ್ಟಿಗಳು ಶ್ರೀಗಳನ್ನು ಕೈಗೊಂಬೆ ಮಾಡಿಕೊಂಡಿದ್ದಾರೆ. ಸ್ವಾಮೀಜಿಗಳು ತಮ್ಮ ಮಾತು ಕೇಳಲಿಲ್ಲ ಎಂಬ ಒಂದೇ ಕಾರಣಕ್ಕೆ ಅವರನ್ನು ಉಚ್ಚಾಟನೆ ಮಾಡಿರುವುದು ಖಂಡನೀಯ. ಸಮಾಜಕ್ಕೆ ಈ ಟ್ರಸ್ಟಿಗಳ ಕೊಡುಗೆ ಶೂನ್ಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.

3. ನಾನು ‘ಕೆಟ್ಟ ಹಣ್ಣಲ್ಲ’, ನೆರಳು ಕೊಡುವ ‘ಬೀಜದ ಹಣ್ಣು’!

ನನ್ನನ್ನು ಕೆಟ್ಟ ಹಣ್ಣು ಎಂದು ನಿಂದಿಸಿ ಬುಟ್ಟಿಯಿಂದ ಹೊರಹಾಕುತ್ತೇವೆ ಎಂದಿದ್ದರು. ಆದರೆ ನಾನು ಕೆಟ್ಟ ಹಣ್ಣಲ್ಲ, ಸಮಾಜಕ್ಕೆ ನೆರಳು ನೀಡುವ ಬೀಜದ ಹಣ್ಣು. ಈಗ ನಾನು ಮಠ ಮತ್ತು ಸ್ವಾಮೀಜಿಗಳ ಪರವಾಗಿ ನಿಂತಿದ್ದೇನೆ. ಬಾಡಿಗಾರ್ಡ್‌ಗಳನ್ನು ಇಟ್ಟುಕೊಂಡು ಬೆದರಿಸಲು ಬಂದರೆ ಇಲ್ಲಿ ಏನೂ ನಡೆಯಲ್ಲ ಎಂದು ಟ್ರಸ್ಟಿಗಳಿಗೆ ನೇರ ಸವಾಲು ಹಾಕಿದರು.

4. ರಾಜಕೀಯ ಹೇಳಿಕೆಗಳಿಂದ ದೂರವಿರಿ

ಶ್ರೀಗಳಿಗೆ ಕಿವಿಮಾತು ಹೇಳಿದ ಶಿವಶಂಕರ್, “ಸ್ವಾಮೀಜಿಗಳೇ, ರಾಜಕಾರಣಿಗಳ ಜೊತೆ ಸ್ನೇಹ ಇರಲಿ, ಆದರೆ ರಾಜಕೀಯದಿಂದ ನೀವು ದೂರವಿರಿ. ವೇದಿಕೆಗಳ ಮೇಲೆ ರಾಜಕೀಯ ಹೇಳಿಕೆ ನೀಡುವುದನ್ನು ನಿಲ್ಲಿಸಿ” ಎಂದು ಸಲಹೆ ನೀಡಿದರು.

5. ಕಾನೂನು ಹೋರಾಟಕ್ಕೆ ಸಿದ್ಧ

“ದುಡ್ಡು ಕೊಟ್ಟು ಮಕ್ಕಳನ್ನು ಕರೆತಂದು ಸ್ವಾಮೀಜಿ ವಿರುದ್ಧ ಸುಳ್ಳು ಹೇಳಿಕೆ ಕೊಡಿಸುತ್ತಿದ್ದಾರೆ. ಶ್ರೀಗಳ ಮೇಲೆ ಹೊರಿಸಿರುವ 12 ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಪ್ರಕರಣ ದಾಖಲಿಸಲು ಸಂಚು ರೂಪಿಸಿದರೆ ನಾವು ಕಾನೂನುಬದ್ಧವಾಗಿ ಎದುರಿಸಲು ಸಿದ್ಧರಿದ್ದೇವೆ. ನಾನು ಶ್ರೀಗಳ ಬೆನ್ನಿಗೆ ದೃಢವಾಗಿ ನಿಲ್ಲುತ್ತೇನೆ” ಎಂದು ಭರವಸೆ ನೀಡಿದರು.

“ಹರಿಹರದಿಂದ ಪ್ರಾರಂಭವಾಗಿರುವ ಈ ಪ್ರತಿರೋಧದ ಕಿಚ್ಚು ಇಡೀ ರಾಜ್ಯಾದ್ಯಂತ ಹರಡಲಿದೆ. ಸಮಾಜದ ಆಸ್ತಿಯನ್ನು ಲೂಟಿ ಹೊಡೆಯಲು ಬಿಡುವುದಿಲ್ಲ.”
— ಹೆಚ್.ಎಸ್. ಶಿವಶಂಕರ್, ಮಾಜಿ ಶಾಸಕರು.

Share

Leave a comment

Leave a Reply

Your email address will not be published. Required fields are marked *

Related Articles
ದಾವಣಗೆರೆ

​Panchamasali: ಪಂಚಮಸಾಲಿ ಟ್ರಸ್ಟ್ ಎಚ್ಚರಿಕೆ ನಡುವೆಯೂ ವಚನಾನಂದ ಶ್ರೀಗಳಿಂದ ಶಕ್ತಿ ಪ್ರದರ್ಶನ

​ದಾವಣಗೆರೆ: (Panchamasali) ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿಯಿರುವ ಪಂಚಮಸಾಲಿ ಮಠದಲ್ಲಿ ಬಸವ ಜಯಂತಿ...

ದಾವಣಗೆರೆ

Hara: ಪಂಚಮಸಾಲಿ ಪೀಠದಲ್ಲಿ ಹೈಡ್ರಾಮಾ: ವಚನಾನಂದ ಶ್ರೀಗಳ ಉಚ್ಚಾಟನೆ – ಏಪ್ರಿಲ್ 27ಕ್ಕೆ ಬಹಿರಂಗ ಲೆಕ್ಕಕ್ಕೆ ಟ್ರಸ್ಟ್ ಸಿದ್ಧ

ದಾವಣಗೆರೆ:(Hara) ಹರಿಹರದ ಪಂಚಮಸಾಲಿ ಪೀಠದಲ್ಲಿ ಉಂಟಾಗಿರುವ ಭಿನ್ನಮತ ಈಗ ಬಹಿರಂಗ ಸಂಘರ್ಷಕ್ಕೆ ನಾಂದಿ ಹಾಡಿದೆ. ಮಠದ...

ಅಪರಾಧದಾವಣಗೆರೆ

Canara Bank: ಕೆನರಾ ಬ್ಯಾಂಕ್‌ಗೆ 4.15 ಲಕ್ಷ ರೂ. ದಂಡ ವಿಧಿಸಿದ ದಾವಣಗೆರೆ ಜಿಲ್ಲಾ ಗ್ರಾಹಕರ ಆಯೋಗ

ದಾವಣಗೆರೆ: (Canara Bank) ಗೃಹ ಸಾಲದ ಮೂಲ ದಾಖಲೆಗಳನ್ನು ಹಿಂತಿರುಗಿಸುವಲ್ಲಿ ನಿರ್ಲಕ್ಷ್ಯ ತೋರಿದ ಕೆನರಾ ಬ್ಯಾಂಕ್‌ಗೆ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಒಟ್ಟು 4,15,000 ರೂ.ಗಳ ಪರಿಹಾರ ಪಾವತಿಸುವಂತೆ ಮಹತ್ವದ ಆದೇಶ ನೀಡಿದೆ. ನಗರದ ಶ್ರೀಮತಿ ಮಂಜುಳಾ ಕೆ.ಬಿ. ಅವರು ಕೆನರಾ ಬ್ಯಾಂಕ್‌ನಲ್ಲಿ ತಮ್ಮ...

ದಾವಣಗೆರೆ

DC: ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿನ ಸಮರ್ಪಕ ಸರಬರಾಜಿಗೆ ಕ್ರಮ : ಜಿ.ಎಂ.ಗಂಗಾಧರಸ್ವಾಮಿ

ದಾವಣಗೆರೆ: (DC) ಜಿಲ್ಲೆಯಲ್ಲಿ ಮುಂಗಾರು ನಿರೀಕ್ಷಿತ ಅವಧಿಯೊಳಗೆ ಆರಂಭಗೊಳ್ಳದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೆರೆ, ಕಟ್ಟೆ-ಕಾಲುವೆಗಳಲ್ಲಿ ಸಂಗ್ರಹವಾಗಿದ್ದ...