ದಾವಣಗೆರೆ

​Panchamasali: ಪಂಚಮಸಾಲಿ ಟ್ರಸ್ಟ್ ಎಚ್ಚರಿಕೆ ನಡುವೆಯೂ ವಚನಾನಂದ ಶ್ರೀಗಳಿಂದ ಶಕ್ತಿ ಪ್ರದರ್ಶನ

Share
Share

ದಾವಣಗೆರೆ: (Panchamasali) ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿಯಿರುವ ಪಂಚಮಸಾಲಿ ಮಠದಲ್ಲಿ ಬಸವ ಜಯಂತಿ ಆಚರಣೆ ಜೋರಾಗಿ ನಡೆಯುತ್ತಿದ್ದು, ಮಠದ ಒಳಗಿನ ಸಂಘರ್ಷ ಈಗ ಬೀದಿಗೆ ಬಂದಿದೆ. ಟ್ರಸ್ಟ್‌ನ ಎಚ್ಚರಿಕೆ ಮತ್ತು ಉಚ್ಚಾಟನೆಯ ನಡುವೆಯೂ ವಚನಾನಂದ ಸ್ವಾಮೀಜಿ ಅವರು ಭವ್ಯವಾಗಿ ಬಸವ ಜಯಂತಿ ಆಚರಿಸಲಾಗಿದೆ.

ಸಂಘರ್ಷಕ್ಕೆ ಕಾರಣವೇನು?

​ಕಳೆದ ಏಪ್ರಿಲ್ 13 ರಿಂದ ಮಠದ ಟ್ರಸ್ಟ್ ಮತ್ತು ವಚನಾನಂದ ಸ್ವಾಮೀಜಿ ಅವರ ನಡುವೆ ತೀವ್ರ ಸಂಘರ್ಷ ಶುರುವಾಗಿದೆ. ಸ್ವಾಮೀಜಿಯವರನ್ನು ಮಠದಿಂದ ಉಚ್ಚಾಟನೆ ಮಾಡಿರುವುದು ಈ ವಿವಾದಕ್ಕೆ ಪ್ರಮುಖ ಕಾರಣವಾಗಿದೆ, ಇದರ ಜೊತೆಗೆ, 2008 ರಿಂದ ನಡೆದ ಮಠದ ವ್ಯವಹಾರಗಳ ಲೆಕ್ಕ ನೀಡುವಂತೆ ಭಕ್ತರ ಒಂದು ಗುಂಪು ಅಭಿಯಾನ ಆರಂಭಿಸಿರುವುದು ಬೆಂಕಿಗೆ ತುಪ್ಪ ಸುರಿದಂತಾಗಿದೆ.

ವಚನಾನಂದ ಶ್ರೀಗಳ ಶಕ್ತಿ ಪ್ರದರ್ಶನ?

​ಇಂದು ಸಂಜೆ ನಡೆಯುತ್ತಿರುವ ಬಸವ ಜಯಂತಿ ಕಾರ್ಯಕ್ರಮವು ಕೇವಲ ಧಾರ್ಮಿಕ ಆಚರಣೆಯಾಗಿ ಉಳಿಯದೆ, ಸ್ವಾಮೀಜಿಯವರ ಪರೋಕ್ಷ ಶಕ್ತಿ ಪ್ರದರ್ಶನದ ವೇದಿಕೆಯಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರನ್ನು ಆಹ್ವಾನಿಸಲಾಗಿದ್ದು, ಸ್ವಾಮೀಜಿ ಪರ ಇರುವ ಗುಂಪು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಹಗಲಿರುಳು ಶ್ರಮಿಸುತ್ತಿದೆ.

ಲೆಕ್ಕ ನೀಡಲು ಮುಂದಾದ ಟ್ರಸ್ಟಿಗಳು

​ಭಕ್ತರ ಸತತ ಆಗ್ರಹಕ್ಕೆ ಮಣಿದಿರುವ ಪಂಚಮಸಾಲಿ ಟ್ರಸ್ಟಿಗಳು, 2008 ರಿಂದ 2026 ರವರೆಗಿನ ಮಠದ ಆದಾಯ ಮತ್ತು ವೆಚ್ಚದ ಲೆಕ್ಕ ನೀಡಲು ಸಿದ್ಧರಾಗಿದ್ದಾರೆ. ಏಪ್ರಿಲ್ 27 ರಂದು ಈ ಲೆಕ್ಕಾಚಾರವನ್ನು ಬಹಿರಂಗಪಡಿಸಲು ಅವರು ನಿರ್ಧರಿಸಿದ್ದಾರೆ,  ಲೆಕ್ಕ ನೀಡಿದ ನಂತರ ಸ್ವಾಮೀಜಿಯವರು ಪೀಠ ಬಿಟ್ಟು ಹೋಗುವಂತೆ ಆಗ್ರಹಿಸಿದ್ದಾರೆ.

ಮಠದ ಆವರಣದಲ್ಲಿ ಬಿಗುವಿನ ವಾತಾವರಣ

​ಪ್ರಸ್ತುತ ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ವಾಮೀಜಿ ಪರ ಮತ್ತು ವಿರೋಧ ಎಂಬ ಎರಡು ಗುಂಪುಗಳ ನಡುವೆ ಸಂಘರ್ಷ ಉಂಟಾಗುವ ಆತಂಕ ಎದುರಾಗಿದೆ. ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವಂತಹ ಪರಿಸ್ಥಿತಿ ಮಠದಲ್ಲಿ ಕಂಡುಬರುತ್ತಿದೆ.

​ಒಟ್ಟಾರೆಯಾಗಿ, ಬಸವಣ್ಣನವರ ತತ್ವ ಸಾರಬೇಕಾದ ಮಠದಲ್ಲಿ ಈಗ ಲೆಕ್ಕಾಚಾರ ಮತ್ತು ಉಚ್ಚಾಟನೆಯ ವಿವಾದ ಮುನ್ನೆಲೆಗೆ ಬಂದಿರುವುದು ಭಕ್ತರಲ್ಲಿ ಆತಂಕ ಮೂಡಿಸಿದೆ.

Share

Leave a comment

Leave a Reply

Your email address will not be published. Required fields are marked *

Don't Miss

Siddu is the country's number one honest prophet: Minister Bairathi Suresh
ದಾವಣಗೆರೆ

Siddu; ಸಿದ್ದು ದೇಶದ ನಂಬರ್ ಒನ್ ಪ್ರಾಮಾಣಿಕ ಮುತ್ಸದ್ದಿ: ಸಚಿವ ಬೈರತಿ ಸುರೇಶ್ ಬಣ್ಣನೆ

ಹರಿಹರ: (Siddu) ದೇಶದ ಅತ್ಯಂತ ಪ್ರಾಮಾಣಿಕ ರಾಜಕಾರಣಿಗಳ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಸ್ಥಾನದಲ್ಲಿದ್ದಾರೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಬಣ್ಣಿಸಿದ್ದಾರೆ. ಹರಿಹರದ ಬೆಳ್ಳೂಡಿ ಗ್ರಾಮದ...

Related Articles
ದಾವಣಗೆರೆಅಪರಾಧ

PDS RICE: 6.14 ಲಕ್ಷ ರೂ. ಮೌಲ್ಯದ ಅಕ್ರಮ ಪಡಿತರ ಅಕ್ಕಿ ಮತ್ತು ರಾಗಿ ವಶ; ಪೊಲೀಸರ ಭರ್ಜರಿ ಕಾರ್ಯಾಚರಣೆ

ದಾವಣಗೆರೆ:(PDS RICE) ಜಿಲ್ಲೆಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಪಡಿತರ ಧಾನ್ಯಗಳನ್ನು ಸಾಗಿಸುತ್ತಿದ್ದ ಜಾಲವನ್ನು...

ದಾವಣಗೆರೆಅಪರಾಧ

PDS: ಅಕ್ರಮ ಪಡಿತರ ಅಕ್ಕಿ, ರಾಗಿ ಸಾಗಾಟ ಪತ್ತೆ – ಆಹಾರ ಇಲಾಖೆ ಅಧಿಕಾರಿಗಳಿಂದ ಲಾರಿ ವಶ, ಪರಿಶೀಲನೆ

ದಾವಣಗೆರೆ:(PDS) ಜಿಲ್ಲೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಹಾಗೂ ರಾಗಿಯನ್ನು ಸಾಗಾಟ ಮಾಡುತ್ತಿದ್ದ ಲಾರಿಯೊಂದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದು,...

ದಾವಣಗೆರೆ

Chess: ಡಿಕೆಎಸ್ ಕಪ್ ಚದುರಂಗ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡದ ಪ್ರಹ್ಲಾದ್ ಸೇನ್ ಪ್ರಥಮ ಸ್ಥಾನ 

ದಾವಣಗೆರೆ:(Chess) ದಾವಣಗೆರೆ ಜಿಲ್ಲಾ ಅಸೋಸಿಯೇಷನ್ ವತಿಯಿಂದ ಡಾ. ಶಾಮನೂರು ಶಿವಶಂಕರಪ್ಪನವರ ಸ್ಮರಣಾರ್ಥವಾಗಿ ಮೊದಲ ಬಾರಿಗೆ ಹಾಗೂ...

ದಾವಣಗೆರೆ

Samarth: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಉದ್ಯಾನವನ ಹೆಚ್ಚಿಸಲು ಸಮರ್ಥ್ ಶ್ಯಾಮನೂರು ಮಲ್ಲಿಕಾರ್ಜುನ್ ಸೂಚನೆ

ದಾವಣಗೆರೆ: (Samarth) ದಾವಣಗೆರೆ ದಕ್ಷಿಣ ಕ್ಚೇತ್ರದಲ್ಲಿ ಹೆಚ್ಚು ಉದ್ಯಾನವನಗಳನ್ನು ನಿರ್ಮಿಸುವ ಜೊತೆಗೆ ಜನಪ್ರತಿನಿಧಿಗಳಿಗೆ ಮನವರಿಕೆ ಆಗುವಂತೆ...