ದಾವಣಗೆರೆ

​Panchamasali: ಪಂಚಮಸಾಲಿ ಟ್ರಸ್ಟ್ ಎಚ್ಚರಿಕೆ ನಡುವೆಯೂ ವಚನಾನಂದ ಶ್ರೀಗಳಿಂದ ಶಕ್ತಿ ಪ್ರದರ್ಶನ

Share
Share

ದಾವಣಗೆರೆ: (Panchamasali) ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿಯಿರುವ ಪಂಚಮಸಾಲಿ ಮಠದಲ್ಲಿ ಬಸವ ಜಯಂತಿ ಆಚರಣೆ ಜೋರಾಗಿ ನಡೆಯುತ್ತಿದ್ದು, ಮಠದ ಒಳಗಿನ ಸಂಘರ್ಷ ಈಗ ಬೀದಿಗೆ ಬಂದಿದೆ. ಟ್ರಸ್ಟ್‌ನ ಎಚ್ಚರಿಕೆ ಮತ್ತು ಉಚ್ಚಾಟನೆಯ ನಡುವೆಯೂ ವಚನಾನಂದ ಸ್ವಾಮೀಜಿ ಅವರು ಭವ್ಯವಾಗಿ ಬಸವ ಜಯಂತಿ ಆಚರಿಸಲಾಗಿದೆ.

ಸಂಘರ್ಷಕ್ಕೆ ಕಾರಣವೇನು?

​ಕಳೆದ ಏಪ್ರಿಲ್ 13 ರಿಂದ ಮಠದ ಟ್ರಸ್ಟ್ ಮತ್ತು ವಚನಾನಂದ ಸ್ವಾಮೀಜಿ ಅವರ ನಡುವೆ ತೀವ್ರ ಸಂಘರ್ಷ ಶುರುವಾಗಿದೆ. ಸ್ವಾಮೀಜಿಯವರನ್ನು ಮಠದಿಂದ ಉಚ್ಚಾಟನೆ ಮಾಡಿರುವುದು ಈ ವಿವಾದಕ್ಕೆ ಪ್ರಮುಖ ಕಾರಣವಾಗಿದೆ, ಇದರ ಜೊತೆಗೆ, 2008 ರಿಂದ ನಡೆದ ಮಠದ ವ್ಯವಹಾರಗಳ ಲೆಕ್ಕ ನೀಡುವಂತೆ ಭಕ್ತರ ಒಂದು ಗುಂಪು ಅಭಿಯಾನ ಆರಂಭಿಸಿರುವುದು ಬೆಂಕಿಗೆ ತುಪ್ಪ ಸುರಿದಂತಾಗಿದೆ.

ವಚನಾನಂದ ಶ್ರೀಗಳ ಶಕ್ತಿ ಪ್ರದರ್ಶನ?

​ಇಂದು ಸಂಜೆ ನಡೆಯುತ್ತಿರುವ ಬಸವ ಜಯಂತಿ ಕಾರ್ಯಕ್ರಮವು ಕೇವಲ ಧಾರ್ಮಿಕ ಆಚರಣೆಯಾಗಿ ಉಳಿಯದೆ, ಸ್ವಾಮೀಜಿಯವರ ಪರೋಕ್ಷ ಶಕ್ತಿ ಪ್ರದರ್ಶನದ ವೇದಿಕೆಯಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರನ್ನು ಆಹ್ವಾನಿಸಲಾಗಿದ್ದು, ಸ್ವಾಮೀಜಿ ಪರ ಇರುವ ಗುಂಪು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಹಗಲಿರುಳು ಶ್ರಮಿಸುತ್ತಿದೆ.

ಲೆಕ್ಕ ನೀಡಲು ಮುಂದಾದ ಟ್ರಸ್ಟಿಗಳು

​ಭಕ್ತರ ಸತತ ಆಗ್ರಹಕ್ಕೆ ಮಣಿದಿರುವ ಪಂಚಮಸಾಲಿ ಟ್ರಸ್ಟಿಗಳು, 2008 ರಿಂದ 2026 ರವರೆಗಿನ ಮಠದ ಆದಾಯ ಮತ್ತು ವೆಚ್ಚದ ಲೆಕ್ಕ ನೀಡಲು ಸಿದ್ಧರಾಗಿದ್ದಾರೆ. ಏಪ್ರಿಲ್ 27 ರಂದು ಈ ಲೆಕ್ಕಾಚಾರವನ್ನು ಬಹಿರಂಗಪಡಿಸಲು ಅವರು ನಿರ್ಧರಿಸಿದ್ದಾರೆ,  ಲೆಕ್ಕ ನೀಡಿದ ನಂತರ ಸ್ವಾಮೀಜಿಯವರು ಪೀಠ ಬಿಟ್ಟು ಹೋಗುವಂತೆ ಆಗ್ರಹಿಸಿದ್ದಾರೆ.

ಮಠದ ಆವರಣದಲ್ಲಿ ಬಿಗುವಿನ ವಾತಾವರಣ

​ಪ್ರಸ್ತುತ ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ವಾಮೀಜಿ ಪರ ಮತ್ತು ವಿರೋಧ ಎಂಬ ಎರಡು ಗುಂಪುಗಳ ನಡುವೆ ಸಂಘರ್ಷ ಉಂಟಾಗುವ ಆತಂಕ ಎದುರಾಗಿದೆ. ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವಂತಹ ಪರಿಸ್ಥಿತಿ ಮಠದಲ್ಲಿ ಕಂಡುಬರುತ್ತಿದೆ.

​ಒಟ್ಟಾರೆಯಾಗಿ, ಬಸವಣ್ಣನವರ ತತ್ವ ಸಾರಬೇಕಾದ ಮಠದಲ್ಲಿ ಈಗ ಲೆಕ್ಕಾಚಾರ ಮತ್ತು ಉಚ್ಚಾಟನೆಯ ವಿವಾದ ಮುನ್ನೆಲೆಗೆ ಬಂದಿರುವುದು ಭಕ್ತರಲ್ಲಿ ಆತಂಕ ಮೂಡಿಸಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ದಾವಣಗೆರೆ

Harihara: ತುಂಗಭದ್ರಾ ನದಿಯಲ್ಲಿ ಅವ್ಯಾಹತ ಅಕ್ರಮ ಮರಳು ಗಣಿಗಾರಿಕೆ; ತಡೆಯಲು ಆಗ್ರಹಿಸಿ ಕದಸಂಸ ಮನವಿ

ಹರಿಹರ:(Harihara) ತಾಲ್ಲೂಕಿನ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ತುಂಗಭದ್ರಾ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು...

ದಾವಣಗೆರೆ

IGP: ವರದಿಗಾರರ ಮೇಲೆ ASP ದರ್ಪ: ಕ್ರಮಕ್ಕೆ ಒತ್ತಾಯಿಸಿ IGPಗೆ ಪತ್ರಕರ್ತರ ಮನವಿ

ದಾವಣಗೆರೆ:(IGP) ಹರಿಹರದ ಪಂಚಮಸಾಲಿ ಮಠದಲ್ಲಿ ನಡೆದ ಘಟನೆಯೊಂದರ ವರದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ದುರ್ವರ್ತನೆ ತೋರಿರುವುದನ್ನು ಖಂಡಿಸಿ...

Related Articles
ಅಪರಾಧದಾವಣಗೆರೆರಾಜ್ಯ / ಕರ್ನಾಟಕ

Medical: ಚಿತ್ರದುರ್ಗ ವೈದ್ಯಕೀಯ ಕಾಲೇಜಿನಲ್ಲಿ ಕೋಟಿಗೂ ಹೆಚ್ಚು ಹಣ ಲೂಟಿ: ಲೋಕಾಯುಕ್ತಕ್ಕೆ ದೂರು

ಚಿತ್ರದುರ್ಗ: (Medical College) ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಸಿಎಂಸಿಆರ್‌ಐ) ನಿರ್ದೇಶಕರಾದ...

ದಾವಣಗೆರೆರಾಜ್ಯ / ಕರ್ನಾಟಕ

Minister: ದಾವಣಗೆರೆ ಜಿಲ್ಲೆಗೆ ಎರಡು ಸಚಿವ ಸ್ಥಾನ, ಮಂಕಾಳ್ ವೈದ್ಯ ಬದಲಿಗೆ ಎಸ್ ಎಸ್ ಮಲ್ಲಿಕಾರ್ಜುನ ಸಂಪುಟ ಸೇರ್ಪಡೆ

ದಾವಣಗೆರೆ: (Minister) ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಸಂಪುಟ ಸಚಿವರನ್ನಾಗಿ ಸೇರಿಸಿಕೊಳ್ಳಲಾಗಿದೆ....

ದಾವಣಗೆರೆ

Students: ಇಂಗ್ಲೆಂಡ್ ಪ್ರವಾಸ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ

ದಾವಣಗೆರೆ:(Students) ಇಂಗ್ಲೆಂಡನ ವೊಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸ್ನಾತಕ ಪದವಿಯ ಪ್ರತಿಭಾನ್ವಿತರು (ಸ್ಕೌಟ್-೦೨) ಅಂತರರಾಷ್ಟಿçಯ ಶೈಕ್ಷಣಿಕ...

ಅಪರಾಧದಾವಣಗೆರೆರಾಜ್ಯ / ಕರ್ನಾಟಕ

PSI: ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಪಾನಮತ್ತ ಮಹಿಳೆ.!

ದಾವಣಗೆರೆ: (PSI) ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಪಾನಮತ್ತ ಮಹಿಳೆಯೊಬ್ಬಳು ಹಲ್ಲೆ ನಡೆಸಿ, ಅಸಭ್ಯವಾಗಿ...