ಬೆಂಗಳೂರು:(Vande Mararam)ರಾಜ್ಯ ಸರ್ಕಾರದ ವಿವಿಧ ಅಧಿಕೃತ ಕಾರ್ಯಕ್ರಮಗಳು ಹಾಗೂ ಸಮಾರಂಭಗಳಲ್ಲಿ “ವಂದೇ ಮಾತರಂ” ರಾಷ್ಟ್ರೀಯ ಗೀತೆಯನ್ನು ಹಾಡುವ ಸಂಬಂಧ ಕರ್ನಾಟಕ ಸರ್ಕಾರವು ಹೊಸ ಸುತ್ತೋಲೆ/ಆದೇಶವನ್ನು ಹೊರಡಿಸಿದೆ.
ಆದೇಶದ ಮುಖ್ಯ ವಿವರಗಳು:
ಎರಡು ಚರಣಗಳಿಗೆ ಮಾತ್ರ ಅವಕಾಶ: ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ “ವಂದೇ ಮಾತರಂ” ಗೀತೆಯ ಮೊದಲ ಎರಡು ಚರಣಗಳನ್ನು (Stanzas) ಮಾತ್ರ ಹಾಡಲು ಆದೇಶಿಸಲಾಗಿದೆ.
ವಿಶೇಷ ವಿನಾಯಿತಿ/ಅಪವಾದ: ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು ಹಾಗೂ ರಾಜ್ಯಪಾಲರು ಉಪಸ್ಥಿತರಿರುವ ಅಧಿಕೃತ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಉಳಿರೆಲ್ಲಾ ರಾಜ್ಯ ಸರ್ಕಾರದ ಕಾರ್ಯಕ್ರಮಗಳಿಗೆ ಈ ನಿಯಮ ಅನ್ವಯಿಸಲಿದೆ.
ಹಿನ್ನೆಲೆ ಮತ್ತು ಉದ್ದೇಶ:
ಭಾರತ ಸರ್ಕಾರದ ಗೃಹ ಸಚಿವಾಲಯವು ಹೊರಡಿಸಿರುವ ಮಾರ್ಗಸೂಚಿಗಳು ಹಾಗೂ ಸಂಪುಟದ ತೀರ್ಮಾನದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದ ಸರ್ಕಾರಿ ಸಮಾರಂಭಗಳಲ್ಲಿ “ವಂದೇ ಮಾತರಂ” ಗೀತೆಯ ಗಾಯನ/ವಾದನದಲ್ಲಿ ಏಕರೂಪತೆ, ಸೂಕ್ತ ಶಿಷ್ಟಾಚಾರ ಹಾಗೂ ಗೌರವವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಈ ಆದೇಶ (ಸಂಖ್ಯೆ: ಸಿಆಸುಇ/03/HCR/2026) ಹೊರಡಿಸಿದೆ.
Leave a comment