ಡಿವೈಎಸ್ಪಿ ಒ.ಬಿ. ಕಲ್ಲೇಶಪ್ಪ ಸ್ವಯಂ ನಿವೃತ್ತಿಗೆ ಸರ್ಕಾರ ಅನುಮತಿ: ಜಗಳೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಆಕಾಂಕ್ಷಿ.!
ದಾವಣಗೆರೆ: ಡಿವೈಎಸ್ಪಿ ಓ.ಬಿ. ಕಲ್ಲೇಶಪ್ಪ ಅವರು ವೈಯಕ್ತಿಕ ಕಾರಣಗಳಿಂದಾಗಿ ಸ್ವ ಇಚ್ಛಾ ನಿವೃತ್ತಿ ಹೊಂದಲು ಸರ್ಕಾರ ಅನುಮತಿ ನೀಡಿದೆ.
ಕಲ್ಲೇಶಪ್ಪ ಅವರು ಗ್ರೂಪ್ ಎ ವೃಂದದ ಅಧಿಕಾರಿಯಾಗಿರುವುದರಿಂದ ಸ್ವಯಂ ನಿವೃತ್ತಿ ಅಂಗೀಕರಿಸಲು ಸರ್ಕಾರವೇ ಸಕ್ಷಮ ಪ್ರಾಧಿಕಾರವಾಗಿರುತ್ತದೆ. ಸ್ವಯಂ ನಿವೃತ್ತಿಗೆ ಕನಿಷ್ಟ 3 ತಿಂಗಳ ಮುಂಚಿತವಾಗಿಯೇ ಮನವಿ ಸಲ್ಲಿಸಬೇಕಾಗಿರುತ್ತದೆ.
ಹಾಗಿದ್ದರೂ ಸಹ ಈ ಪ್ರಕರಣದಲ್ಲಿ ಕಲ್ಲೇಶಪ್ಪ ಅವರಿಗೆ 3 ತಿಂಗಳ ಮೊದಲೇ ಮನವಿಯನ್ನು ಸಲ್ಲಿಸಬೇಕೆಂಬ ಷರತ್ತು ಸಡಿಲಿಸಿ, ನಿವೃತ್ತಿ ಬಗ್ಗೆ ಸರ್ಕಾರದ ಹಂತದಲ್ಲಿ ತೀರ್ಮಾನ ತೆಗೆದುಕೊಳ್ಳುವಂತೆ ಡಿಜಿ ಹಾಗೂ ಐಜಿಪಿ ಕೋರಿದ್ದ ಹಿನ್ನೆಲೆಯಲ್ಲಿ ಸ್ವ ಇಚ್ಛಾ ನಿವೃತ್ತಿಗೆ ಅನುಮತಿ ನೀಡಲಾಗಿದೆ.
ಕಲ್ಲೇಶಪ್ಪ ಅವರು ಬಿಜೆಪಿಯಿಂದ ಜಗಳೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.