ಡಿವೈಎಸ್ಪಿ ಒ.ಬಿ. ಕಲ್ಲೇಶಪ್ಪ ಸ್ವಯಂ ನಿವೃತ್ತಿಗೆ ಸರ್ಕಾರ ಅನುಮತಿ: ಜಗಳೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಆಕಾಂಕ್ಷಿ.!

ಒ.ಬಿ. ಕಲ್ಲೇಶಪ್ಪ ಸ್ವಯಂ ನಿವೃತ್ತಿಗೆ ಸರ್ಕಾರ ಅನುಮತಿ

ದಾವಣಗೆರೆ: ಡಿವೈಎಸ್ಪಿ ಓ.ಬಿ. ಕಲ್ಲೇಶಪ್ಪ ಅವರು ವೈಯಕ್ತಿಕ ಕಾರಣಗಳಿಂದಾಗಿ ಸ್ವ ಇಚ್ಛಾ ನಿವೃತ್ತಿ ಹೊಂದಲು ಸರ್ಕಾರ ಅನುಮತಿ ನೀಡಿದೆ.

ಕಲ್ಲೇಶಪ್ಪ ಅವರು ಗ್ರೂಪ್ ಎ ವೃಂದದ ಅಧಿಕಾರಿಯಾಗಿರುವುದರಿಂದ ಸ್ವಯಂ ನಿವೃತ್ತಿ ಅಂಗೀಕರಿಸಲು ಸರ್ಕಾರವೇ ಸಕ್ಷಮ ಪ್ರಾಧಿಕಾರವಾಗಿರುತ್ತದೆ. ಸ್ವಯಂ ನಿವೃತ್ತಿಗೆ ಕನಿಷ್ಟ 3 ತಿಂಗಳ ಮುಂಚಿತವಾಗಿಯೇ ಮನವಿ ಸಲ್ಲಿಸಬೇಕಾಗಿರುತ್ತದೆ.

ಹಾಗಿದ್ದರೂ ಸಹ ಈ ಪ್ರಕರಣದಲ್ಲಿ ಕಲ್ಲೇಶಪ್ಪ ಅವರಿಗೆ 3 ತಿಂಗಳ ಮೊದಲೇ ಮನವಿಯನ್ನು ಸಲ್ಲಿಸಬೇಕೆಂಬ ಷರತ್ತು ಸಡಿಲಿಸಿ, ನಿವೃತ್ತಿ ಬಗ್ಗೆ ಸರ್ಕಾರದ ಹಂತದಲ್ಲಿ ತೀರ್ಮಾನ ತೆಗೆದುಕೊಳ್ಳುವಂತೆ ಡಿಜಿ ಹಾಗೂ ಐಜಿಪಿ ಕೋರಿದ್ದ ಹಿನ್ನೆಲೆಯಲ್ಲಿ ಸ್ವ ಇಚ್ಛಾ ನಿವೃತ್ತಿಗೆ ಅನುಮತಿ ನೀಡಲಾಗಿದೆ.

ಕಲ್ಲೇಶಪ್ಪ ಅವರು ಬಿಜೆಪಿಯಿಂದ ಜಗಳೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!