ದಾವಣಗೆರೆಯಲ್ಲಿ ಎಲ್ಲರೂ ಶಾಂತಿಯುತವಾಗಿ ಬಾಳಲಿ, ಘಟನೆಗೆ ಕಾರಣರಾದವರು ಶಿಕ್ಷೆ ಅನುಭವಿಸಲಿ – ಶಾಮನೂರು ಶಿವಶಂಕರಪ್ಪ

ದಾವಣಗೆರೆ:ನಮ್ಮ ದಾವಣಗೆರೆಯಲ್ಲಿ ಹಾಗಬಾರದ್ದು ಗಲಾಟೆಯಾಗಿದೆ ಇದು ಆಗಬಾರದಿತ್ತು ಎಂದು ದಾವಣಗೆರೆ ದಕ್ಷಿಣ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಘಟನೆಗೆ ಕಾರಣರಾದವರು ಯಾರೇ ಆಗಲಿ ಅವರೆಲ್ಲರೂ ಶಿಕ್ಷೆ ಅನುಭವಿಸಬೇಕು, ನಾನು ಊರಲ್ಲಿ ಇರಲಿಲ್ಲ, ಇದ್ದಿದ್ದರೆ ಅದರ ಮಾತೇ ಬೇರೆನೆ ಆಗ್ತಿತ್ತು ಎಂದು ಈ ವೇಳೆ ಹೇಳಿದರು, ಒಟ್ಟಾರೆ ಶಾಂತಿಯುತವಾಗಿ ಎಲ್ಲರೂ ನಡೆದುಕೊಳ್ಳಲಿ ಅಧಿಕಾರಿಗಳ ಬಳಿ ಈ ಬಗ್ಗೆ ಮಾತನಾಡಿದ್ದೆನೆ, ಎಲ್ಲರೂ ಶಾಂತಿಯುತವಾಗಿ ಬಾಳಲಿ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಮನವಿ ಮಾಡಿದರು.

ಈ ಗಲಾಟೆ ಮುಂದುವರಿಸುವುದು ಬೇಡ ಇಲ್ಲಿಗೆ ನಿಲ್ಲಿಸಿ ಎಂದ ಹಿರಿಯ ಶಾಸಕರು ಹೇಳಿದರು. ಬಿಜೆಪಿಯವರು ಎಲ್ಲಾ ಕಡೆ ಗಲಾಟೆ ಮಾಡಿಸೋದೆ ಕೆಲಸವಾಗಿದೆ, ಅವರಿಗೆ ಆಸ್ಪದ ಕೊಡದ ರೀತಿಯಲ್ಲಿ ನಮ್ಮ ಕೆಲಸ ಮಾಡೋಣ ಎಂದು ದಾವಣಗೆರೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!