ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ವಾಸಪ್ಪ ಎಂ ನೇಮಕ
ದಾವಣಗೆರೆ: ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ವಾಸಪ್ಪ ಎಂ ನೇಮಕಗೊಂಡಿದ್ದಾರೆ.
ಇಂದು ನಡೆದ ಸಭೆಯಲ್ಲಿ ಸರ್ವಸದಸ್ಯರ ಒಪ್ಪಿಗೆ ಮೇರೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಉಪಾಧ್ಯಕ್ಷರಾಗಿ ಪರಮೇಶ್ವರಪ್ಪ ಅರಕೇರಿ, ಪ್ರಧಾನ ಕಾರ್ಯದರ್ಶಿ ಎಂ. ಮಂಜಪ್ಪ ಹೊನ್ನಾಳಿ, ಸಹ ಕಾರ್ಯದರ್ಶಿ ಹನುಮಂತಪ್ಪ ದಿಡಗೂರ, ಖಜಾಂಚಿ ರವಿಕುಮರ್ ಸೂರಗೊಂಡಕೊಪ್ಪ.
ನಿರ್ದೇಶಕರಾಗಿ ಕೆ.ಹೆಚ್. ಕೇಶವಮೂರ್ತಿ ಹೊನ್ನಾಳಿ, ಎಸ್.ವಿ. ಬಸವರಾಜಪ್ಪ ತಕ್ಕನಹಳ್ಳಿ, ಹೆಚ್. ಜಯಪ್ಪ ಕತ್ತಿಗೆ, ಕೆ.ಹೆಚ್. ಹನುಮಂತಪ್ಪ ಸೊರಟೂರ್, ಬಿ.ಹೆಚ್. ಸಿದ್ದೇಶ್ ಬೆನಕನಹಳ್ಳಿ, ಹೆಚ್. ವಿ. ಚಂದ್ರಪ್ಪ ನ್ಯಾಮತಿ, ಚಂದ್ರಪ್ಪ ಬಿ. ಹತ್ತೂರ್, ಹನುಮಂತಪ್ಪ ಕೆ. ಹೊನ್ನಾಳಿ ಇವರನ್ನು ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಇವರನ್ನು ಮುಂದಿನ 05 ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ.