ಜಿಂಕೆ ಕೊಂಬುಗಳನ್ನು ಮಾರಾಟ ಮಾಡಲು ಹೋದ ವ್ಯಕ್ತಿ ಈಗ ಕಂಬಿ ಹಿಂದೆ

ಶಿವಮೊಗ್ಗ: ಅಕ್ರಮವಾಗಿ ಜಿಂಕೆ ಕೊಂಬುಗಳನ್ನು ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿ ಈಗ ಕಂಬಿ ಏಣಿಸುತ್ತಿದ್ದಾನೆ.

ಸಾಗರ ಅರಣ್ಯ ಸಂಚಾರಿ ದಳದ ಸಿಬ್ಬಂದಿ ದಾಳಿ ನಡೆಸಿ ಅಕ್ರಮವಾಗಿ ಜಿಂಕೆ ಕೊಂಬುಗಳನ್ನು ‌ಮಾರಾಟ ಮಾಡಲು ಮುಂದಾಗಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಶಿವಮೊಗ್ಗ ತಾಲೂಕು ಯರೇಕೊಪ್ಪ ಗ್ರಾಮದ ನಿವಾಸಿ ಟಿ ನಾಗೇಶ್ ನಾಯ್ಕ ಅಕ್ರಮವಾಗಿ ಜಿಂಕೆ ಕೊಂಬು ಮಾರಾಟ ಮಾಡಲು ಹೋಗಿ ಸಿಕ್ಕಿಬಿದ್ದ ‌ವ್ಯಕ್ತಿ.

ಶಿವಮೊಗ್ಗ ಸಮೀಪದ ತ್ಯಾವರೆ ಕೊಪ್ಪದ ಬಳಿ ಜಿಂಕೆ ಕೊಂಬುಗಳ ಸಮೇತ ನಾಗೇಶ್ ನಾಯ್ಕ್ ನನ್ನು ಬಂಧಿಸಲಾಗಿದೆ.

ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ದಾಳಿಯಲ್ಲಿ ಸಾಗರ ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್ಐ ಮಲ್ಲಿಕಾರ್ಜುನ ಮತ್ತು ಸಿಬ್ಬಂದಿಗಳಾದ
ಗಣೇಶ್ ಬಿ ಸಿ, ರತ್ನಾಕರ್, ಗಿರೀಶ್ ಕುಮಾರ್ ಎಂ ಸಿ, ಶಿವರುದ್ರಯ್ಯ, ಮಹಮದ್ ರಫೀಕ್, ಕೃಷ್ಣ ಜಿ ಮತ್ತು ಮಹೇಶ್ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!