Breaking news: ಡಿಕೆಶಿ ಬಗ್ಗೆ ಆಡಿದ ಪಿಸು ಮಾತು.! ಕಾಂಗ್ರೆಸ್ ಮಾಧ್ಯಮ ಸಯೋಜಕ ಸಲೀಂ 6 ವರ್ಷ ಅಮಾನತು. ಉಗ್ರಪ್ಪ ಗೆ ನೋಟೀಸ್ ಜಾರಿ
ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲೇ ಕೆಪಿಸಿಸಸ ಅಧ್ಯಕ್ಷರ ವ್ಯವಹಾರ ದ ಬಗ್ಗೆ, ಭ್ರಷ್ಟಾಚಾರದ ಬಗ್ಗೆ ಆಡಿದ ಮಾತು. ಇದೀಗ ಸಂಕಷ್ಟಕ್ಕೆ ಸಿಲುಕಿಸಿದೆ.
ಇಬ್ಬರು ನಾಯಕರ ಮಾತಿನ ವಿಡಿಯೋ ವೈರಲ್ ಆಗಿತ್ತು ಇದೀಗ ಕೆಪಿಸಿಸಿ ವತಿಯಿಂದ ಶಿಸ್ತು ಕ್ರಮ ಜರುಗಿಸಿದೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೇಸ್ ನಾಯಕರಾದ ಉಗ್ರಪ್ಪ ಮತ್ತು ಸಲೀಂ ನಡುವೆ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ನಡೆದ ಪಿಸು ಮಾತಿನ ವಿಡಿಯೋ ಈಗ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಿದೆ. ಈ ಪಿಸು ಮಾತಿನ ವಿಡಿಯೋ ಬಿಜೆಪಿ ಮತ್ತು ಜೆಡಿಎಸ್ ಗೆ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಮಾತನಾಡಲು ಪ್ರಮುಖ ಅಸ್ತ್ರ ವಾಗಲಿದೆ.
ಹೌದು ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಎಂಬವರ ಪಿಸು ಮಾತು ಇದೀಗ ವೈರಲ್ ಆಗಿದೆ. ಈ ಪಿಸು ಮಾತಿನಿಂದ ಈಗಾಗಲೇ ಸಲೀಂ ಅವರ ತಲೆದಂಡ ಕೂಡ ಆಗಿದೆ.
ಮಾಧ್ಯಮ ಗೋಷ್ಠಿ ಆರಂಭಕ್ಕೆ ಮುನ್ನ ಸಲೀಂ ಮಾಜಿ ಸಂಸದ ಉಗ್ರಪ್ಪ ಜೊತೆ ನಡೆಸಿದ ಪಿಸು ಮಾತಿನ ಸಂಭಾಷಣೆ ಇದೀಗ ವೈರಲ್ ಆಗಿದೆ.
ಕೆಪಿಸಿಸಿ ಅಧ್ಯಕ್ಷರ ಕಾರ್ಯ ವೈಖರಿ ಮತ್ತು ಅವರ ಸಂಪತ್ತಿನ ಬಗ್ಗೆ ಸಲೀಂ ಉಗ್ರಪ್ಪ ಬಳಿ ಪ್ರಸ್ತಾಪಿಸಿದ್ದಾರೆ. ಡಿ ಕೆ ಶಿವಕುಮಾರ್ ಹುಡುಗರ ಬಳಿಯೇ 50, 100 ಕೋಟಿ ರೂಪಾಯಿ ಇದೆ. ಹೀಗಿರುವಾಗ ಡಿ ಕೆ ಶಿವಕುಮಾರ್ ಬಳಿ ಎಷ್ಟು ಹಣ ಇರಬಹುದು ಎಂಬ ರೀತಿಯಲ್ಲಿ ಸಲೀಂ ಮಾತನಾಡಿದ್ದಾರೆ. ಜಲ ಸಂಪನ್ಮೂಲ ಇಲಾಖೆ ಐದಾರು ಪರ್ಸೆಂಟ್ ಕಮೀಷನ್ ನಡೆಯುತ್ತಿತ್ತು, ಡಿಕೆಸಿ ಜಕ ಸಂಪನ್ಮೂಲ ಸಚಿವರಾದ ನಂತರ ಅದು 12 ಪರ್ಸೆಂಟ್ ಗೆ ಏರಿಕೆಯಾಗಿದೆ ಎಂಬ ಮಾತುಗಳು ಈ ವಿಡಿಯೋ ದಲ್ಲಿವೆ. ಇದೇ ವೇಳೆ ಉಗ್ರಪ್ಪ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಲು ತಾವು ಸಹಾಯ ಮಾಡಿರೋದಾಗಿ ಹೇಳಿದ್ದಾರೆ.
ಅವರ ಅಧ್ಯಕ್ಷರ ಮಾನವನ್ನು ಅವರ ಪಕ್ಷದ ನಾಯಕರೇ ಹರಾಜೂ ಹಾಕಿದ್ದಾರೆ. ವಿರೋದ ಪಕ್ಷಗಳ ಕೈಗೆ ಹೊಸ ಅಸ್ತ್ರ ನೀಡಿದ್ದಾರೆ.