ಸಾಂಕ್ರಾಮಿಕ ರೋಗಗಳ ನಿರ್ಮೂಲನೆಯಿಂದ ದೇಶದ ಅಭಿವೃದ್ಧಿ : ಡಾ. ಚಂದ್ರಮೋಹನ್

ದಾವಣಗೆರೆ : ಕ್ಷಯ ರೋಗವನ್ನು 2025 ರ ಒಳಗೆ ಕ್ಷಯರೋಗ ಮುಕ್ತ ದೇಶವನ್ನಾಗಿ ಮಾಡಬೇಕಾಗಿದೆ. ಆದುದರಿಂದ ಕ್ಷಯ ರೋಗವನ್ನು ಸೋಲಿಸೋಣ ದೇಶವನ್ನು ಉಳಿಸೋಣ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಚಂದ್ರಮೋಹನ್ ಹೇಳಿದರು.
ಹರಿಹರ ನಗರದಲ್ಲಿ ಮಾರ್ಚ 24 ರಂದು ತಾಲೂಕು ಮಟ್ಟದ ಕ್ಷಯರೋಗ ನಿರ್ಮೂಲನ ದಿನಾಚರಣೆ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಕ್ಷಯ ರೋಗವನ್ನು 2025 ರ ಒಳಗೆ ಕ್ಷಯರೋಗ ಮುಕ್ತ ದೇಶವನ್ನಾಗಿ ಮಾಡಬೇಕಾಗಿದೆ. ಆದುದರಿಂದ ಕ್ಷಯ ರೋಗವನ್ನು ಸೋಲಿಸೋಣ ದೇಶವನ್ನು ಉಳಿಸೋಣ ಎಂದು ಕ್ಷಯ ರೋಗದ ಕುರಿತು ಘೋಷಣೆಗಳನ್ನು ಕೂಗುವುದರೊಂದಿಗೆ ಜಾಗೃತಿ ಮೂಡಿಸೋಣ ಹಾಗೂ ಈ ವರ್ಷದ ಘೋಷಣ ವಾಕ್ಯ “ಹೌದು ನಾವು ಕ್ಷಯರೋಗವನ್ನು ಕೊನೆಗೊಳಿಸಬಹುದು.” ದ ಉದ್ದೇಶ ರೋಗವನ್ನು ನಿರ್ಮೂಲನೆ ಮಾಡಿ. ದೇಶವನ್ನು ರಕ್ಷಣೆ ಮಾಡೋಣ ಎನ್ನುವುದಾಗಿದೆ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್ ಮಾತನಾಡಿ ಕ್ಷಯ ರೋಗದ ಬಗ್ಗೆ ಕ್ರಿಯಾ ಯೋಜನೆ ಸಭೆ. ಕಾರ್ಯತಂತ್ರದ ಸಭೆ. ತಂಡ ಕಟ್ಟುವ ಸಭೆ. ತಂಡದ ಸದಸ್ಯರು ಒಟ್ಟಾಗಿ ಕೆಲಸ ಮಾಡುವ ಸಭೆಗಳನ್ನು ಆಯೋಜಿಸುವ ಮೂಲ ಕ್ಷಯ ರೋಗದ ಬಗ್ಗೆ ಜನ ಜಾಗೃತಿ ಮೂಡಿಸುವುದರ ತಂತ್ರಗಾರಿಕೆಯೊಂದಿಗೆ ಕ್ಷಯ ರೋಗವನ್ನು ನಿರ್ಮೂಲನೆ ಮಾಡಬೇಕಾಗಿದೆ. ಎಂದರು.
ಜಾಥವು ನಗರದ ಮುಖ್ಯ ಬೀದಿಯಿಂದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಗೆ ಬಂದು ಮುಕ್ತಾಯವಾಯಿತು.
ಕಾರ್ಯಕ್ರಮದಲ್ಲಿ ಡಾ. ವಿಶ್ವನಾಥ್, ಡಾ. ಮಹಮ್ಮದ್ ಅಲಿ,. ಡಾ. ಮಮತಾ,. ಡಾ. ಕಲ್ಲೇಶ್,. ಡಾ. ಯುವರಾಜ್, ತಾಲೂಕು ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಶ್ರೀಮತಿ ಸುಧಾ, ತಾಲೂಕು ಕ್ಷಯರೋಗ ಮೇಲ್ವಿಚಾರಕ ಮಂಜುನಾಥ, ಕ್ಷಯರೋಗ ನಿರ್ಮೂಲನ ಘಟಕದ ಸತೀಶ್, ಟಿ ಬಿ ಹೆಚ್ ಬಿ. ಶರೀಫ್, ಎಸ್.ಟಿ.ಎಲ್.ಎಸ್ ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು, ಶುಶ್ರೂಷಣಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.
£