ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ ಅಧಿಕಾರಿಗಳಿಂದ ವಂತಿಗೆ ಸ್ವೀಕಾರ ಕ್ರಮಕ್ಕೆ ವಕೀಲ ರೇವನಗೌಡ ಅವರಿಂದ ಮುಖ್ಯಮಂತ್ರಿಗೆ ಪತ್ರ

ಹರಪನಹಳ್ಳಿ: ಶಾಸಕ ಕರುಣಾಕರ ರೆಡ್ಡಿ ಅವರು ತಾಲ್ಲೂಕು ಅಧಿಕಾರಿಗಳಿಂದ ಹಣ ವಸೂಲಿ ಮಾಡುವ ದಂಧೆಯನ್ನು ತಡೆಹಿಡಿಯುವಂತೆ ಕೋರಿ ಹರಪನಹಳ್ಳಿ ಟೀರ್ ಕಾಲೋನಿಯ ವಕೀಲ ಬಿ.ರೇವನಗೌಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಬಿಜೆಪಿ ಶಾಸಕ ಜಿ.ಕರುಣಾಕರ ರೆಡ್ಡಿ ಸಂಪೂರ್ಣವಾಗಿ ತಾಲ್ಲೂಕಿನ ಎಲ್ಲಾ ಅಧಿಕಾರಿಗಳಿಂದಲೂ ಪ್ರತಿ ತಿಂಗಳು ವಂತಿಗೆ ಪಡೆಯುತ್ತಿದ್ದಾರೆ. ಸಬ್ ರಿಜಿಸ್ಟಾರ್ ಮೇಡಂ ಅವರಿಂದ ಪ್ರತಿ ತಿಂಗಳು 5 ಲಕ್ಷ ರೂ ಕೊಡಬೇಕಿದೆ. ತಹಶೀಲ್ದಾರ್ 5 ಲಕ್ಷ ಹೀಗೆ ಪ್ರತಿ ಅಧಿಕಾರಿಗೂ ಒಂದೊಂದು ಮೊತ್ತ ನಿಗಧಿಪಡಿಸಿ ವಸೂಲಿ ದಂಧೆಗೆ ಇಳಿದಿದ್ದಾರೆ.
ಎ.ಸಿ. ಟಿವಿ ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಶಿವಕುಮಾರ್ ಅವರು ತಾಲ್ಲೂಕಿನಲ್ಲಿ ನಿಷ್ಟಾವಂತ ಅಧಿಕಾರಿಗಳಾಗಿದ್ದು, ಇವರು ಯಾರಿಂದಲೂ ಲಂಚ ಪಡೆಯುವುದಿಲ್ಲ. ಆದರೆ ರೆಡ್ಡಿ ಅವರಿಗೆ ವಂತಿಗೆ ಕೊಡಬೇಕಾದರೆ ಇಂತಹ ಅಧಿಕಾರಿಗಳೂ ಸಹ ಲಂಚ ಪಡೆಯುವ ಅನಿವಾರ್ಯ ಸೃಷ್ಟಿಯಾಗುತ್ತದೆ.
ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರರಹಿತ ಅಡಳಿತ ಕೊಡುವುದಾಗಿ ಹೇಳುತ್ತಾರೆ. ಆದರೆ ರೆಡ್ಡಿ ಅವರಂತಹ ಬಿಜೆಪಿ ಶಾಸಕರಿಗೆ ಕಡಿವಾಣ ಹಾಕುವುದರಿಂದ ಮಾತ್ರ ಭ್ರಷ್ಟಾಚಾರ ರಹಿತ ಆಡಳಿತ ನಡೆಸಲು ಸಾಧ್ಯವಾಗುತ್ತದೆ.
ಆದ್ದರಿಂದ ಕೂಡಲೇ ಜಿ.ಕರುಣಾಕರ ರೆಡ್ಡಿಯವರ ಬಗ್ಗೆ ಸೂಕ್ತ ಮಾಹಿಹಿ ಪಡೆದು ಕ್ರಮ ಕೈಗೊಳ್ಳಬೇಕು. ಇದರಿಂದ ಅಧಿಕಾರಿ ವರ್ಗವದುರ ಸ್ವಚ್ಛ ಸೇವೆ ಮಾಡಲು ಅನುಕೂಲವಾಗುತ್ತದೆ ಎಂದವರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ, ವಿಧಾನಸಭಾಧ್ಯಕ್ಷರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ತಾಲ್ಲೂಕಿನ ಎಲ್ಲಾ ಅಧಿಕಾರಿಗಳಿಗೂ ಕಳುಹಿಸಿದ್ದಾರೆ.