ಘಟಕಾಧಿಕಾರಿಗಳಿಗೆ ಸನ್ಮಾನ ಸಮಾರಂಭ

ಘಟಕಾಧಿಕಾರಿಗಳಿಗೆ ಸನ್ಮಾನ ಸಮಾರಂಭ

ದಾವಣಗೆರೆ: ಚುನಾವಣಾ ಕರ್ತವ್ಯದ ಯಶಸ್ವಿ ನಿರ್ವಹಣೆಗೆ ಶ್ರಮಿಸಿದ ಜಿಲ್ಲೆಯ ಘಟಕಾಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಅರುಣ್ ಕೆ ಸನ್ಮಾನಿಸಿದರು. ಭಾನುವಾರ ಮಧ್ಯಾಹ್ನ 12 ಗಂಟೆಗೆ ನಗರದ ದೇವರಾಜು ಅರಸು ಬಡಾವಣೆ `ಬಿ` ಬ್ಲಾಕ್ ನಲ್ಲಿರುವ ಜಿಲ್ಲಾ ಸಮಾದೇಷ್ಟರ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ವಿಧಾನಸಭಾ

ಚುನಾವಣೆ-2023ರ ಬಂದೋಬಸ್ತ್ ಕರ್ತವ್ಯದ ಯಶಸ್ವಿ ನಿರ್ವಹಣೆ ಪ್ರಯುಕ್ತ ಜಿಲ್ಲೆಯ ಘಟಕಾಧಿಕಾರಿಗಳಿಗೆ ಸನ್ಮಾನ ಸಮಾರಂಭ ಜರುಗಿತು.
ಜಿಲ್ಲಾ ಕಮಾಂಡೆಂಟ್ ಹೋಂಗಾಡ್ರ್ಸ್ ಡಾ. ಸುಜಿತ್‍ಕುಮಾರ್ ಎನ್.ಹೆಚ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಾದೇಷ್ಟರ ಕಚೇರಿ ಸ್ಟಾಫ್ ಆಫೀಸರ್ ಡಾ. ಬಿ.ಹೆಚ್. ವೀರಪ್ಪ, ಮಾಜಿ ಸಮಾದೇಷ್ಟರು ಹಾಗೂ ಘಟಕ ಮತ್ತು ಉಪ ಘಟಕಾಧಿಕಾರಿಗಳು, ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!