ಐನಾತಿ ಕಳ್ಳರು ದೇವಸ್ಥಾನದಲ್ಲಿ ಕಳ್ಳತನ ಮಾಡಿರೋದು ಏನು ಗೊತ್ತಾ.?

ದಾವಣಗೆರೆ: ದೇವಸ್ಥಾನದಲ್ಲಿರುವ ಸುಮಾರು 86 ಸಾವಿರ ಮೌಲ್ಯದ ಘಂಟೆಗಳನ್ನು ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಕಡ್ಲೆಬಾಳು ಗ್ರಾಮದ ಶ್ರೀ ಮದ್ವಾಂಜನೇಯ ದೇವಸ್ಥಾನದಲ್ಲಿ ನಡೆದಿದೆ.
ಭಕ್ತರು ನೀಡಿದ್ದ 101 ಕೆಜಿ ಇರುವ ಹಿತ್ತಾಳೆಯ ಎರಡು ಘಂಟೆಗಳನ್ನು ಕಳ್ಳರು ರಾತ್ರಿಯ ವೇಳೆ ಅಪಹರಿಸಿದ್ದು, ದೇವಾಲಯದ ಅರ್ಚಕ ಮುಂಜಾನೆ ಪೂಜೆಗೆಂದು ಬಂದಾಗ ಪ್ರಕರಣ ಬಯಲಿಗೆ ಬಂದಿದೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.