murder; ತಂದೆಯನ್ನೇ ಕೊಲೆಗೈದ ಪಾಪಿ ಮಗ
![](https://garudavoice.com/wp-content/uploads/2023/11/murder-1024x768.jpg)
ಚಿತ್ರದುರ್ಗ, ನ.07: ತಂದೆಯನ್ನೆ ಮಗ ಕೊಲೆಗೈದು (murder) ಪೊಲೀಸ್ ಠಾಣೆಗೆ ಬಂದ ಘಟನೆ ಚಿತ್ರದುರ್ಗದ ಜಿಲ್ಲೆಯ ಚಳ್ಳಕೆರೆ ತಾಲೂಕಿನ ವರವು ಕಾವಲು ಬಳಿ ನಡೆದಿದೆ
ಸೂರಯ್ಯ (55) ಕೊಲೆಯಾದ ವ್ಯಕ್ತಿ, ಚಳ್ಳಕೆರೆ ತಾಲೂಕಿನ ಬತ್ತಯ್ಯನ ಹಟ್ಟಿ ನಿವಾಸಿ. ಪಾಪಿ ಮಗ ಮೋಹನ್ ಹತ್ಯೆ ಮಾಡಿದ ಆರೋಪಿ.
gold theft; ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪಿಯ ಬಂಧನ
ತಡರಾತ್ರಿ ಕುಡಿದ ಮತ್ತಿನಲ್ಲಿ ತಂದೆ- ಮಗನ ನಡುವೆ ಜಗಳ ನಡೆದಿತ್ತು. ಇಂದು ಬೆಳಗಿನ ಜಾವ ಆರೋಪಿ ಮೋಹನ್ ತಂದೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಹತ್ಯೆ ಮಾಡಿದ ಬಳಿಕ ಚಳ್ಳಕೆರೆ ಠಾಣೆಗೆ ಖುದ್ದಾಗಿ ಬಂದಿದ್ದ ಪೊಲೀಸರಿಗೆ ಶರಣಾಗಿದ್ದಾನೆ.
ಸ್ಥಳಕ್ಕೆ ಸಿಪಿಐ ಸಮೀವುಲ್ಲಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.