ನಿಮ್ಮ ಮನೆ ಕಾಯ್ಹೋಗ:ಕೆಲಸ ಮಾಡ್ರೋ ಅಂದ್ರೇ ಇವರದ್ದು ಬಗ್ಗಲ್ಲ.! ವಸತಿ ಸಚಿವ ವಿ.ಸೋಮಣ್ಣರಿಂದ ಸ್ಲಂ ಬೋರ್ಡ್ ಅಧಿಕಾರಿಗಳಿಗರ ತರಾಟೆ

IMG-20210821-WA0010

 

ದಾವಣಗೆರೆ: ಇವರಿಗೆ ಇನೋವಾ ಕಾರು, ಐಎಎಸ್ ಅಧಿಕಾರಿಗೆ ನೀಡುವ ಸವಲತ್ತು ನೀಡ್ತೇವೆ. ಆದ್ರೇ, ನಿಮ್ಮ ಮನೆ ಕಾಯ್ಹೋಗ… ಕೆಲಸ ಮಾಡ್ರೋ ಅಂದ್ರೇ ಇವರದ್ದು ಬಗ್ಗಲ್ಲ…!

ಮಾಜಿ ಸಿಎಂ ದಿ.ದೇವರಾಜ್ ಅರಸು ಅವರು ಸ್ಲಂನವರಿಗೆ ಸಹಾಯವಾಗಲಿ ಎಂದು ಸ್ಲಮ್ ಬೋರ್ಡ್ ಮಾಡಿ ಹೋದರು. ಆದ್ರೇ, ಈ ಕಪನಿಗೌಡ ಹಾಗೂ ಪದ್ಮನಾಭ್ ಇಬ್ಬರು ಕೂಡ ಆ ಸ್ಲಮ್​​ ಬೋರ್ಡ್‌ನ ತಿಂದು ತಿಂದು ಕೊಬ್ಬಿದ್ದಾರೆ. ಇಬರಿಬ್ಬರು ದೊಡ್ಡ ತಿಮಿಂಗಲಗಳು. ಇವರು ಇವಾಗ ನನ್ನಂತವನು ಬಂದ್ರೂ ಬಗ್ಗಲ್ಲ ಅಂದ್ರೇ, ಮತ್ಯಾರೀಗೆ ಬಗ್ತೀರಾ, ಹೇಳ್ರೋ ಮಾರಾಯ ?

ವಸತಿ ಸಚಿವ ವಿ.ಸೋಮಣ್ಣ ಹೀಗೆ ಒಂದೇ ಸಮನೆ ಸ್ಲಂ ಬೋರ್ಡ್ ಸಿಇಒ ಕಪನಿಗೌಡ ಮತ್ತು ಪದ್ಮನಾಭ ಎಂಬುವವರ ವಿರುದ್ಧ ಕೆಂಡಕರಿದ ಘಟನೆ ಶನಿವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ವಸತಿ ಹಾಗೂ ಮೂಲಸೌಲಭ್ಯ ಇಲಾಖೆಯಲ್ಲಿ ಕೈಗೊಂಡಿರುವ ಅಭಿವೃದ್ಧಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆಯಿತು.

ಇವನೊಬ್ಬ ಕಪನಿಗೌಡ, ಮತ್ತೊಬ್ಬ ಪದ್ಮನಾಭ್ ಎಂಬುವವನು ಇದಾನೆ. ಇವರು ಮೈಸೂರು ಜಿಲ್ಲೆಯಲ್ಲಿ ದೊಡ್ಡ ತಿಮಿಂಗಿಲಗಳಾಗಿದ್ದರು. ಇವರಿಬ್ಬರು ಇಂಟರ್ ನ್ಯಾಶನಲ್ ತಿಮಿಂಗಿಲಗಳಿದ್ದಂತೆ ಇವರನ್ನ ನಾವು ಮೈಸೂರಿನಿಂದ ತೆಗೆದು ದಾವಣಗೆರೆಗೆ ವರ್ಗಾವಣೆ ಮಾಡಿದ್ದೆವು. ಆದರೂ ಮತ್ತು ಅವರ ತಿಮಿಂಗಿಲದ ಕೆಲಸ ಮುಂದುವರೆಸಿದ್ದಾರೆ ಎಂದು ಹರಿಹಾಯ್ದರು.

ಕೊರೊನಾ ಬಂದು ಎಂಥೆತವರೇ ಹೊರಟು ಹೋದ್ರು ಕಣ್ರಯ್ಯ, ನೀವು ಹಾಗೇ ಉಳಿದಿರಿ. ನಿಮ್ಮ ಆರೋಗ್ಯದ ವಿಚಾರದಲ್ಲಿ ಇರುವ ಬಡವರ ಪರ ಕೆಲಸ ಮಾಡುವುದರಲ್ಲಿ ಇಲ್ಲ. ನಿಮ್ಮ ಇನೋವ ಕಾರಿಗೆ ಜಿಪಿಎಸ್ ಹಾಕಿಸ್ತೀನಿ ನೋಡಿ ಎಂದು‌‌ ಎಚ್ಚರಿಸಿದರು.

Leave a Reply

Your email address will not be published. Required fields are marked *

error: Content is protected !!