ಡಿ.೩೧ ಕ್ಕೆ ಕನ್ನಡ ರಾಜ್ಯೋತ್ಸವ,ಕವಿಗೋಷ್ಠ, ಕೃತಿ ಲೋಕಾರ್ಪಣೆ

On December 31, Kannada Rajyotsava, Kavigostha, public offering of works

ದಾವಣಗೆರೆ: ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಎ.ಕೆ.ಫೌಂಡೇಶನ್, ಕನ್ನಡ ಜಾಗೃತಿ ಕೇಂದ್ರ ಹಾಗೂ ನಿರ್ವರ್ಣ ಆರ್ಟ್ ಗ್ಯಾಲರಿ ಸಹಯೋಹದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ, ಎಸ್.ಮಲ್ಲಿಕಾರ್ಜುನಪ್ಪ ಅವರ ಬಸವಣ್ಣ ಕಂಡ ಶರಣ ಶರಣೆಯರು ಕೃತಿ ಲೋಕಾರ್ಪಣೆ ಹಾಗೂ ಕವಿಗೋಷ್ಠಿಯನ್ನು ಡಿಸೆಂಬರ್ ೩೧ರಂದು ಹಮ್ಮಿಕೊಳ್ಳಲಾಗಿದೆ ಎಂದು ಚುಸಾಪÀ ಜಿಲ್ಲಾಧ್ಯಕ್ಷ ಜಿ.ಹೆಚ್.ರಾಜಶೇಖರ್ ಗುಂಡಗತ್ತಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಡಿ.೩೧ರ ಶನಿವಾರ ಬೆಳಿಗ್ಗೆ ೧೦:೩೦ಕ್ಕೆ ನಗರದ ಎಂಸಿಸಿ ಬಿಬ್ಲಾಕ್ನಲ್ಲಿರುವ ಭಾರತ ಸೇವಾದಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಎ.ಕೆ.ಫೌಂಡೇಶನ್ ಅಧ್ಯಕ್ಷ ಕೆ.ಬಿ.ಕೊಟ್ರೇಶ್ ಉದ್ಘಾಟಿಸಲಿದ್ದು, ಜಿಲ್ಲಾ ಸೇವಾದಳ ಅಧ್ಯಕ್ಷ ಚನ್ನಪ್ಪ ಪಲ್ಗಾಗಟ್ಟಿ ಕೃತಿ ಬಿಡುಗಡೆ ಮಾಡಲಿದ್ದಾರೆ. ಕೃತಿ ಕುರಿತು ಡಿ.ಸಿ.ಮಲ್ಲಿಕಾರ್ಜುನ್ ಕೃತಿ ಕುರಿತು ಮಾತನಾಡುವರು.ಮುಖ್ಯ ಅತಿಥಿಗಳಾಗಿ ಸುಮಂಗಲಾ ಮಲ್ಲಿಕಾರ್ಜುನಪ್ಪ, ಎ.ಜೆ.ರವಿಕುಮಾರ್ ಆಗಮಿಸಲಿದ್ದಾರೆ. ಈ.ಹೆಚ್.ರಾಜಶೇಖರ್ ಗುಂಡಗಟ್ಟಿ ಅಧ್ಯಕ್ಷತೆ ವಹುಸಲಿದ್ದಾರೆ ಎಂದರು.

ಇದೇ ವೇಳೆ ಕನ್ನಡ ಪರ ಹೋರಾಟಗಾರರಾದ ಬಂಕಾಪುರ ಚನ್ನಬಸಪ್ಪ, ಐರಣಿ ಬಸವರಾಜ್, ಮಾಜಿ ಸೈನಿಕರಾದ ಸುಬೇದಾರ್ ಮೇಜರ್, ಎನ್.ಕೆ.ರವಿಕುಮಾರ್,ಹವಾಲ್ದಾರ್ ಶಶಿಕಾಂತ್ ಹಾಗೂ ಸಾಹಿತ್ಯ ಕ್ಷೇತ್ರದಿಂದ ಯು.ಕೆ.ಅಣ್ಣಪ್ಪ, ಎ.ಸಿ.ಮಂಜಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ವಿಶೇಷವಾಗಿ ನಿವೃತ್ತ ಯೋಧ ಹನುಮಂತಪ್ಪ ಅವರ ಪುತ್ರಿ ಸುನೀತಾ ಅವರು ಪ್ರಸ್ತುತ ಪಶ್ಚಿಮ ಬಂಗಾಳದ ರೋಷನಾ ಬಾದ್‌ನಲ್ಲಿ ಬಿಎಸ್‌ಎಫ್ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದು, ಅವರನ್ನು ಸಹ ಈ ಸಂದರ್ಭದಲ್ಲಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.

ಕವಿಗೋಷ್ಠಯ ಅಧ್ಯಕ್ಷತೆಯನ್ನು ಕೆ.ಎಸ್. ವೀರಭದ್ರಪ್ಪ ತೆಲಗಿ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಪ್ರಕಾಶ್ ಬೂಸನೂರು, ಮಲ್ಲಮ್ಮನಾಗರಾಜ್, ರತ್ನಾ ಸಾಲಿಮಠ, ಆಗಮಿಸಲಿದ್ದು, ಡಿ.ಸನಾವುಲ್ಲಾ ನವಲೇಹಾಳ್ ಆಶಯ ನುಡಿಗಳನ್ನಾಡಲಿದ್ದಾರೆ ಎಂದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!