Sports; ಕ್ರೀಡೆಯಿಂದ ದೈಹಿಕ, ಮಾನಸಿಕವಾಗಿ ಸದೃಢ: ಪ್ರಭಾವತಿ ಸಲಹೆ
![](https://garudavoice.com/wp-content/uploads/2023/08/sports-1024x461.jpg)
ದಾವಣಗೆರೆ, ಆ.29: ಪಾಠದ ಜೊತೆ ಕ್ರೀಡೆಗಳಲ್ಲೂ (Sports) ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ಹೊಂದಬೇಕು, ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಬಹುದೆಂದು ಪ್ರಾಚಾರ್ಯರಾದ ಪ್ರಭಾವತಿ ಅವರು ವಿದ್ಯಾರ್ಥಿಗಳಿಗೆ (Students) ಸಲಹೆ ನೀಡಿದರು.
ನಗರದ ನಿಟ್ಟುವಳ್ಳಿ ರಸ್ತೆಯಲ್ಲಿರುವ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ಇಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆ (National Sports Day) ಮಾಡಲಾಗಿದ್ದು, ಈ ವೇಳೆ ವಿದ್ಯಾರ್ಥಿಗಳಿಗೆ ಕ್ರೀಡೆ ಬಗ್ಗೆ ಆಸಕ್ತಿ ಹೊಂದುವಂತೆ ತಿಳಿಸಿದರು.
Interview; ಆ.30ಕ್ಕೆ ವಾಕ್ ಇನ್ ಇಂಟರ್ವ್ಯೂ
ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿ ಕರ್ತೀ ತರಬೇಕೆಂದು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದರು. ಇದೇ ವೇಳೆ ಕ್ಲಸ್ಟರ್ ಮಟ್ಟದಲ್ಲಿ 23 ಬಹುಮಾನ ಪಡೆದು, ತಾಲೂಕು ಮಟ್ಟಕ್ಕೆ ಆಯ್ಕೆಯಾದ 22 ವಿದ್ಯಾರ್ಥಿಗಳು, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ 9 ವಿದ್ಯಾರ್ಥಿಗಳಿಗೆ ಪ್ರಭಾವತಿ ಅವರು ಬಹುಮಾನ ನೀಡಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿ ಹರೀಶ್ ಬಾಬು, ಮುಖ್ಯೋಪಧ್ಯಾಯರಾದ ಮಾಲಾ, ಗಾಯತ್ರಿ ಹಾಗೂ ಪ್ರಕಾಶ್, ದೈಹಿಕ ಶಿಕ್ಷಣ ವಿಭಾಗದ ನಾಗರಾಜ್, ರಾಹುಲ್, ಇಂದ್ರಮ್ಮ ಹಾಗೂ ಶರ್ಮಿಳಾ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.