ಗಾಂಧಿ ಎಂಬ ಹೆಸರು ಭಾರತೀಯರಿಗೆ ಮಾತ್ರ‌ ಪ್ರೇರಕ ಶಕ್ತಿಯಲ್ಲ, ಜಗತ್ತಿಗೆ ಅಹಿಂಸಾ ತತ್ವವಾಗಿದೆ – ಹಿರಿಯ ನ್ಯಾಯಾಧೀಶ ಪ್ರವೀಣ್ ನಾಯಕ್

ದಾವಣಗೆರೆ : ಬಾಪೂಜಿ ಹುಟ್ಟಿದ ದಿನವನ್ನು ವಿಶ್ವ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಹಾತ್ಮ ಗಾಂಧಿ ಎಂಬ ಹೆಸರು ಭಾರತೀಯರಿಗೆ ಮಾತ್ರ ಪ್ರೇರಕ ಶಕ್ತಿಯಲ್ಲ. ಬದಲಾಗಿ ಇಡೀ ಜಗತ್ತಿಗೆ ಅಹಿಂಸಾ ತತ್ವವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರವೀಣ್‌ನಾಯಕ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಖಿ ಒನ್ ಸ್ಟಾಪ್ ಸೆಂಟರ್ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಶ್ರೀರಾಮ ನಗರದಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಅಹಿಂಸಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಾಂಧಿಜೀ ಅವರ ಹೆಸರು ಅಹಿಂಸಾ ದ್ಯೂತಕವಾಗಿರುವುದರಿಂದ ಅಕ್ಟೋಬರ್ 2ರನ್ನು ವಿಶ್ವಸಂಸ್ಥೆ ಅಹಿಂಸಾ ದಿನವನ್ನಾಗಿ ಘೋಷಿಸಿದೆ. ಸ್ವಾತಂತ್ರ ಹೋರಾಟಕ್ಕೆ ಗಾಂಧಿಜಿ ಅವರ ಅಮೂಲ್ಯ ಕೊಡುಗೆಗಳನ್ನು ಗೌರವಿಸಬೇಕು. ಅವರ ಚಿಂತನೆಗಳನ್ನು, ಆದರ್ಶಗಳನ್ನು ಯುವಪೀಳಿಗೆಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಹಿರಿಯ ವಕೀಲರಾದ ಎಲ್.ಹೆಚ್.ಅರುಣಕುಮಾರ್, ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿಂಸೆ, ಕ್ರೌರ್ಯಗಳನ್ನು ತಡೆಯಲು ಗಾಂಧಿಜಿಯAತಹ ಶಾಂತಿ ಧೂತರ ತತ್ವಗಳನ್ನು ಜಗತ್ತಿಗೆ ಜ್ಞಾಪಿಸುವುದು ಅವಶ್ಯಕವಾಗಿದೆ. ಗಾಂಧಿಜಿಯವರ ಜೀವನವೇ ಒಂದು ಸಂದೇಶವಾಗಿದ್ದು, ಅವರ ಅಹಿಂಸಾ ಮಾರ್ಗದ ಹೋರಾಟ ಚಳವಳಿಗಳಿಗೆ ಪ್ರೇರಕ ಶಕ್ತಿಯಾಗಬೇಕು ಎಂದು ಹೇಳಿದರು.

ಆರ್‌ಎಲ್‌ಲಾ ಕಾಲೇಜಿನ ಪ್ರಾಧ್ಯಪಕ ವಿದ್ಯಾಧರ್ ವೇಶವರ್ಮ ಮಾತನಾಡಿ, ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು 2007ನೇ ಇಸವಿಯಿಂದ ವಿಶ್ವ ಅಹಿಂಸಾದಿನವನ್ನು ಘೋಷಿಸಿದೆ. ಮಹಾತ್ಮ ಗಾಂಧಿಜಿಯವರ ಆದರ್ಶವನ್ನು ಪ್ರತಿಯೊಬ್ಬರು ಪಾಲಿಸಿಕೊಂಡು ಜೀವನವನ್ನ ಯಶಸ್ವಿಗೊಳಿಸಿಕೊಳ್ಳಬೇಕು. ಗಾಂಧಿಜಿ ಅವರ ತತ್ವಗಳು ಇಂದಿಗೂ ಪ್ರಸ್ತುತವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಹೆಚ್. ವಿಜಯಕುಮಾರ್, ಜಿಲ್ಲಾ ಮಹಿಳಾ ಸಂರಕ್ಷಾಧಿಕಾರಿ ಪೂರ್ಣಿಮಾ, ರಾಜ್ಯ ಮಹಿಳಾ ನಿಲಯದ ಅಧೀಕ್ಷಕರು ಸುಜಾತ, ಬಾಲಕಿಯರ ಬಾಲ ಮಂದಿರದ ಅಧೀಕ್ಷರು ಮೈತ್ರಾ, ಸಖಿ ಕೇಂದ್ರದ ಕಾನೂನು ಸಲಹೆಗಾರರಾದ ತಂಜಿಮಾ ಕೌಸರಿ, ಮಧುರ ಸೇರಿದಂತೆ ಇತರರು ಇದ್ದರು.

ಇದೇ ವೇಳೆ ಅಂತರಾಷ್ಟ್ರೀಯ ಅಹಿಂಸಾ ದಿನಾಚರಣೆ ಅಂಗವಾಗಿ ಮ್ಯೂಜಿಕಲ್ ಚೇರ್, ರಂಗೋಲಿ ಸ್ಫರ್ದೆಯನ್ನು ಏರ್ಪಡಿಸಲಾಗಿತ್ತು. ವಿಜೇತರರಿಗೆ ಬಹುಮಾನ ವಿತರಿಸಲಾಯಿತು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!