26 ರಂದು ರಾಜ್ಯಮಟ್ಟದ ಓಪನ್ ರಾಪಿಡ್ ಚೆಸ್ ಪಂದ್ಯಾವಳಿ

ದಾವಣಗೆರೆ: ಜಿಲ್ಲಾ ಚೆಸ್ ಅಸೋಸಿ ಯೇಷನ್ (ರಿ) ವತಿಯಿಂದ ಮಾರ್ಚ್ 26 ರಂದು ಕರ್ನಾಟಕ ರಾಜ್ಯಮಟ್ಟದ ಓಪನ್ ರಾಪಿಡ್ ಚೆಸ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿಯವರು ತಿಳಿಸಿದರು.
ನಗರದ ಎವಿಕೆ ಕಾಲೇಜು ರಸ್ತೆಯಲ್ಲಿರುವ ಗುರುಭವನದಲ್ಲಿ ನಡೆಯುವ ಪಂದ್ಯಾವಳಿಯ ಉದ್ಘಾಟನೆಯನ್ನು ಭಾನುವಾರ ಬೆಳಿಗ್ಗೆ 10-30 ಕ್ಕೆ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರಾದ ದಿನೇಶ್ ಕೆ. ಶೆಟ್ಟಿ ರವರು ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಗಡಿಗುಡಾಳ್ ಮಂಜುನಾಥ್, ಪಾಲಿಕೆ ಸದಸ್ಯರಾದ ಎ. ನಾಗರಾಜ್ ಆಗಮಿಸವರು. ಪಂದ್ಯಾವಳಿ 7 ಸುತ್ತುಗಳಲ್ಲಿ ನಡೆದು ಸಂಜೆ 5-30ಕ್ಕೆ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಈ ಪಂದ್ಯಾವಳಿಯಲ್ಲಿ ಗೆದ್ದ ಮೊದಲ ಸ್ಥಾನ ಪಡೆದ ಸ್ಪರ್ಧಾಳಗೆ 3000 ನಗದು ಹಾಗೂ ವಿಶೇಷ ಪಾರಿತೋಷಕ ಹಾಗೂ ನಂತರದ 25 ಸ್ಥಾನಗಳಿಗೆ ನಗದು ಹಾಗೂ ಪಾರಿತೋಷಕ ಮತ್ತು 07, 09. 11. 13. 15. 17 ವರ್ಷಗಳ ಒಳಗಿನ ಹುಡುಗ-ಹುಡುಗಿಯರಿಗೆ ತಲಾ 5 ವಿಶೇಷ ಪಾರಿತೋಷಕ ಹಾಗೂ 50 ವರ್ಷ ಮೇಲ್ಪಟ್ಟ ಹಿರಿಯರಿಗೆ ಹಾಗೂ 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ವಿಶೇಷ ನಗದು ಹಾಗೂ ಪಾರಿತೋಷಕ, ಈ ಪಂದ್ಯಾವಳಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಒಟ್ಟು 300ಕ್ಕೂ ಹೆಚ್ಚು ಸ್ಪರ್ಧಾಳಗಳು ಭಾಗವಹಿಸುವ ನಿರೀಕ್ಷೆ ಇದೆ ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ದಾಳುಗಳಿಗೂ ಪ್ರಶಸ್ತಿ ಪತ್ರ ಹಾಗೂ 100 ಪಾರಿತೋಷಕ ಮತ್ತು ರೂ.30,000/- ಗಳ ನಗದು ಬಹುಮಾನ ವಿತರಿಸಲಾಗುವುದು ಎಂದು ಸಂಘದ ಕಾರ್ಯದರ್ಶಿಗಳು ಯುವರಾಜ್ ತಿಳಿಸಿದರು.
ಹೆಸರನ್ನು ನೋಂದಾಯಿಸಲು ಟಿ ಯುವರಾಜ್ 9945613469 7259310197 ಅವರನ್ನು ಸಂಪರ್ಕಿಸಿ ನೋಂದಾಯಿಸಿ ಕೊಳ್ಳಬಹುದು ಎಂದು ಅಸೋಸಿಯೇಷನ್ ಅಧ್ಯಕ್ಷರಾದ ದಿನೇಶ್ ಕೆ. ಶೆಟ್ಟಿ ರವರು ತಿಳಿಸಿದ್ದಾರೆ.