congress; ಲೋಕಸಭೆ ಚುನಾವಣೆ ಟಿಕೆಟ್ ಕಾಂಗ್ರೆಸ್ ಕಾರ್ಯಕರ್ತರಿಗೆ ಮೊದಲ ಪ್ರಾಮುಖ್ಯತೆ: ಎಸ್ ಎಸ್ ಮಲ್ಲಿಕಾರ್ಜುನ್
![ಆಗಸ್ಟ್ ಮೊದಲ ವಾರದಲ್ಲಿ ಭದ್ರಾ ನದಿಗೆ ನೀರು ಬಿಡಲು ಕ್ಷಣಗಣನೆ : ಎಸ್.ಎಸ್.ಮಲ್ಲಿಕಾರ್ಜುನ್](https://garudavoice.com/wp-content/uploads/2023/07/ssm-2-881x1024.jpg)
ದಾವಣಗೆರೆ, ಅ.09: ಬಾವುಟ ಹಿಡಿದು, ಪೋಸ್ಟರ್ ಅಂಟಿಸಿ, ಎಲೆಕ್ಷನ್ ಮಾಡಿದವರಿಗೆ ಮೊದಲ ಆದ್ಯತೆ ಎಲ್ಲಿಂದಲೋ ಬಂದರೆ ಆಗುವುದಿಲ್ಲ. ಮೊದಲು ಕಾಂಗ್ರೆಸ್ (congress ) ಕಾರ್ಯಕರ್ತರಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ಲೋಕಸಭೆ ಚುನಾವಣೆ ಟಿಕೆಟ್ ಯಾರಿಗೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ಎಲ್ಲಿಂದಲೋ ಬಂದ ಕಾಳಪ್ಪ, ಬೋಳಪ್ಪ ಮಲ್ಲಪ್ಪರಿಗೆ ಟಿಕೆಟ್ ಇಲ್ಲ.ಯಾರು ಏನು ಅಂತ ಮೊದಲು ಗೊತ್ತಾಗಬೇಕು. ಎಲ್ಲರೂ ಕಾರ್ಯಕರ್ತರೆ ಎಂದು ಹೇಳಿದರು.
renukacharya; ನಾನು ದಾವಣಗೆರೆ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿ: ರೇಣುಕಾಚಾರ್ಯ
ಟಿಕೆಟ್ ನೀಡುವ ಮೊದಲು ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರ ಜೊತೆ ಮಾತಾಡಬೇಕು, ಆಮೇಲೆ ಹೈ ಕಮಾಂಡ್ ಯಾರಿಗೆ ಕೊಡತ್ತೋ ಅವರು ಸ್ಪರ್ಧೆ ಮಾಡಲಿ. ಆದರೆ, ಎಲ್ಲಿಂದಲೋ ಬಂದು ನಾನು ಆಕಾಂಕ್ಷಿ ಎಂದರೆ ಇಲ್ಲಿ ನಡೆಯಲ್ಲ ಎಂದು ಕಾಂಗ್ರೆಸ್ ಎಂಪಿ ಟಿಕೆಟ್ ಆಕಾಂಕ್ಷಿ ಎಂದು ಓಡಾಡುತ್ತಿರುವವರಿಗೆ ಎಚ್ಚರಿಕೆ ನೀಡಿದ್ದಾರೆ.