ರಾಜ್ಯ / ಕರ್ನಾಟಕ

DYSP: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರಿ ಸರ್ಜರಿ: 74 ಡಿವೈಎಸ್‌ಪಿಗಳ ವರ್ಗಾವಣೆ – ಇಲ್ಲಿದೆ ಕಂಪ್ಲೀಟ್ ಲಿಸ್ಟ್

Share
Share

ಬೆಂಗಳೂರು:(DYSP) ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ದೊಡ್ಡ ಮಟ್ಟದ ವರ್ಗಾವಣೆ ಪ್ರಕ್ರಿಯೆ ನಡೆಸಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಕೂಡಲೇ ಜಾರಿಗೆ ಬರುವಂತೆ ಒಟ್ಟು 74 ಡಿವೈಎಸ್‌ಪಿ (ಸಿವಿಲ್) ಅಧಿಕಾರಿಗಳನ್ನು ವಿವಿಧ ಸ್ಥಳಗಳಿಗೆ ನಿಯೋಜಿಸಿ ಆದೇಶ ಹೊರಡಿಸಲಾಗಿದೆ.

ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರ ಕಛೇರಿಯಿಂದ ಹೊರಬಿದ್ದಿರುವ ಈ ಆದೇಶದಲ್ಲಿ, ಹಲವು ಹಳೆಯ ವರ್ಗಾವಣೆಗಳನ್ನು ಮಾರ್ಪಡಿಸಿ ಹೊಸದಾಗಿ ಸ್ಥಳನಿಯುಕ್ತಿ ಮಾಡಲಾಗಿದೆ.

*ಪ್ರಮುಖ ವರ್ಗಾವಣೆಗಳ ವಿವರ:*
**ಚಂದ್ರಕಾಂತ ನಂದಾರೆಡ್ಡಿ:** ರಾಜ್ಯ ಗುಪ್ತವಾರ್ತೆಯಿಂದ ಬಸವನಬಾಗೇವಾಡಿ ಉಪ ವಿಭಾಗಕ್ಕೆ.
**ರಾಜೇಂದ್ರ ಶಿವಪ್ರಕಾಶ್ ನಾಯಕ್:** ನಾಗೇನಹಳ್ಳಿ ಪಿ.ಟಿ.ಸಿ ಇಂದ ಹುಬ್ಬಳ್ಳಿ-ಧಾರವಾಡದ ಸಿಸಿಬಿಗೆ.
**ಐ.ಪಿ.ಮೇದಪ್ಪ:** ಬೆಂಗಳೂರು ವಿಶೇಷ ಶಾಖೆಯಿಂದ ಕೊಡಗು ಜಿಲ್ಲೆಯ ಸಿಸಿಪಿಎಸ್‌ಗೆ.
**ಅನುಶಾ ಜಿ:** ಬೆಸ್ಕಾಂ ಜಾಗೃತದಳದಿಂದ ಬಾಣಸವಾಡಿ ಉಪ ವಿಭಾಗಕ್ಕೆ.
**ಜೋಗಿನ ಡಿ ಗೋಪಾಲ:** ಸಿಸಿಬಿ ಬೆಂಗಳೂರಿನಿಂದ ಸುಬ್ರಮಣ್ಯಪುರ ಉಪ ವಿಭಾಗಕ್ಕೆ.
**ರವಿಕುಮಾರ್ ಕೆ.ವೈ:** ಸಿಸಿಪಿಎಸ್ ಚಿಕ್ಕಬಳ್ಳಾಪುರದಿಂದ ಚಿಕ್ಕಬಾಣಾವರ ಉಪ ವಿಭಾಗಕ್ಕೆ.

*ಒಂದೇ ಕಡೆ ಮುಂದುವರಿದ ಅಧಿಕಾರಿ:*
ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆಗೊಂಡಿದ್ದ *ಗಂಗಾಧರ್ ಬಿ.ಎಂ ಅವರ ಆದೇಶವನ್ನು ರದ್ದುಪಡಿಸಲಾಗಿದ್ದು, ಅವರನ್ನು ಬೆಳಗಾವಿ ಗ್ರಾಮಾಂತರ ಉಪ ವಿಭಾಗದಲ್ಲಿಯೇ ಮುಂದುವರಿಸಲಾಗಿದೆ.

*ವರ್ಗಾವಣೆಗೊಂಡ ಅಧಿಕಾರಿಗಳ ಸಂಪೂರ್ಣ ಪಟ್ಟಿ:*

ಚಂದ್ರಕಾಂತ ನಂದಾರೆಡ್ಡಿ ಅವರನ್ನು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಉಪ ವಿಭಾಗಕ್ಕೆ ನಿಯೋಜಿಸಲಾಗಿದೆ. ಬಾಲಪ್ಪ ನಂದಗಾವಿ ಅವರನ್ನು ಬೀದರ್ ಜಿಲ್ಲೆಯ ಭಾಲ್ಕಿ ಉಪ ವಿಭಾಗಕ್ಕೆ ಹಾಗೂ ಶಿವಾನಂದ ಪವಾಡಶೆಟ್ಟಿ ಅವರನ್ನು ರಾಜ್ಯ ಗುಪ್ತವಾರ್ತೆಗೆ ವರ್ಗಾಯಿಸಲಾಗಿದೆ. ರಾಜೇಂದ್ರ ಶಿವಪ್ರಕಾಶ್ ನಾಯಕ್ ಅವರನ್ನು ಹುಬ್ಬಳ್ಳಿ-ಧಾರವಾಡ ನಗರದ ಸಿಸಿಬಿಗೆ ನಿಯೋಜಿಸಲಾಗಿದ್ದು ಸಣ್ಣ ತಮ್ಮಪ್ಪಯ್ಯ ಒಡೆಯರ್ ಅವರನ್ನು ಡಿ.ಸಿ.ಆರ್.ಇ ಗೆ ವರ್ಗಾವಣೆ ಮಾಡಲಾಗಿದೆ. ಶೀಲವಂತ ಹೊಸಮನಿ ಅವರನ್ನು ಬಳ್ಳಾರಿ ಜಿಲ್ಲೆಯ ಸಿಸಿಪಿಎಸ್‌ಗೆ ಹಾಗೂ ಅಜೀಜ್ ಕಲಾದಗಿ ಅವರನ್ನು ಬೆಳಗಾವಿಯ ಐಜಿಪಿ ಕಚೇರಿಗೆ ನೇಮಿಸಲಾಗಿದೆ.

​ಬೆಂಗಳೂರು ನಗರದಲ್ಲೂ ವ್ಯಾಪಕ ವರ್ಗಾವಣೆ ನಡೆದಿದ್ದು ಐ.ಪಿ.ಮೇದಪ್ಪ ಅವರನ್ನು ಕೊಡಗು ಜಿಲ್ಲೆಯ ಸಿಸಿಪಿಎಸ್‌ಗೆ ಹಾಗೂ ರಾಜೇಶ್ ಎಲ್.ವೈ ಅವರನ್ನು ಬೆಂಗಳೂರು ನಗರದ ಸಿಸಿಬಿಗೆ ವರ್ಗಾಯಿಸಲಾಗಿದೆ. ಪರಮೇಶ್ವರ ಹೆಚ್.ಎಸ್ ಅವರಿಗೆ ಶೇಷಾದ್ರಿಪುರಂ ಉಪ ವಿಭಾಗದ ಜವಾಬ್ದಾರಿ ನೀಡಲಾಗಿದ್ದು ವಿಜಯ ಹೆಚ್ ಅವರನ್ನು ಯಲಹಂಕ ಉಪ ವಿಭಾಗಕ್ಕೆ ನಿಯೋಜಿಸಲಾಗಿದೆ. ಉಮಾಶಂಕರ್ ಬಿ ಅವರನ್ನು ಮಲ್ಲೇಶ್ವರಂ ಉಪ ವಿಭಾಗಕ್ಕೆ ಮತ್ತು ದೀಪಕ್ ಸಿ.ವಿ ಅವರನ್ನು ಬೆಂಗಳೂರು ನಗರದ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ.

​ಮೈಸೂರು ಮತ್ತು ಇತರ ಜಿಲ್ಲೆಗಳ ವಿವರ ನೋಡುವುದಾದರೆ ಧರ್ಮೇಂದ್ರ ಎಂ ಅವರನ್ನು ನಂಜನಗೂಡು ಉಪ ವಿಭಾಗಕ್ಕೆ ಹಾಗೂ ಪ್ರಕಾಶ್ ಕೆ.ಸಿ ಅವರನ್ನು ಮೈಸೂರು ನಗರದ ಕೃಷ್ಣರಾಜ ಉಪ ವಿಭಾಗಕ್ಕೆ ನೇಮಿಸಲಾಗಿದೆ. ಭೂತೇಗೌಡ ವಿ.ಎಸ್ ಅವರನ್ನು ಬೆಂಗಳೂರಿನ ವಿಜಯನಗರ ಉಪ ವಿಭಾಗಕ್ಕೆ ಮತ್ತು ಅನುಶಾ ಜಿ ಅವರನ್ನು ಬಾಣಸವಾಡಿ ಉಪ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಸತ್ಯವತಿ ಎಸ್ ಕೆಂಗೇರಿ ಉಪ ವಿಭಾಗಕ್ಕೆ ಹಾಗೂ ಬಸವರಾಜ ಅಲ್ಲಪ್ಪ ತೇಲಿ ರಾಜ್ಯ ಗುಪ್ತವಾರ್ತೆಗೆ ನಿಯೋಜನೆಗೊಂಡಿದ್ದಾರೆ.

​ಇನ್ನುಳಿದಂತೆ ಲಕ್ಷ್ಮೀನಾರಯಣ ಕೆ.ಸಿ ಅವರನ್ನು ಜಯನಗರ ಉಪ ವಿಭಾಗಕ್ಕೆ ಹಾಗೂ ರೇಣುಕಾ ಪ್ರಸಾದ್ ಬಿ.ವೈ ಅವರನ್ನು ಯಶವಂತಪುರ ಉಪ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಉಮಾ ರಾಣಿ ಎಸ್ ಅವರನ್ನು ನೆಲಮಂಗಲ ಉಪ ವಿಭಾಗಕ್ಕೆ ಹಾಗೂ ಮುರಳೀಧರ್ ಪಿ ಅವರನ್ನು ವಿಜಯನಗರ ಜಿಲ್ಲೆಯ ಹೊಸಪೇಟೆ ಉಪ ವಿಭಾಗಕ್ಕೆ ನಿಯೋಜಿಸಲಾಗಿದೆ. ಗಂಗಾಧರ್ ಬಿ.ಎಂ ಅವರ ವರ್ಗಾವಣೆಯನ್ನು ರದ್ದುಗೊಳಿಸಿ ಬೆಳಗಾವಿ ಗ್ರಾಮಾಂತರ ಉಪ ವಿಭಾಗದಲ್ಲಿಯೇ ಮುಂದುವರಿಸಲಾಗಿದೆ.

ವರ್ಗಾವಣೆಗೊಂಡ ಎಲ್ಲಾ ಅಧಿಕಾರಿಗಳು ಯಾವುದೇ ಸೇರುವಿಕೆ ಕಾಲವನ್ನು ಬಳಸಿಕೊಳ್ಳದೆ ತಕ್ಷಣವೇ ನಿಯೋಜಿತ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ವರದಿ: ಹೆಚ್ ಎಂ ಪಿ ಕುಮಾರ್ – ಸಂಪಾದಕರು (9740365719)

*Copyright protected*

Share

Leave a comment

Leave a Reply

Your email address will not be published. Required fields are marked *

Don't Miss

ದಾವಣಗೆರೆ

Harihara: ತುಂಗಭದ್ರಾ ನದಿಯಲ್ಲಿ ಅವ್ಯಾಹತ ಅಕ್ರಮ ಮರಳು ಗಣಿಗಾರಿಕೆ; ತಡೆಯಲು ಆಗ್ರಹಿಸಿ ಕದಸಂಸ ಮನವಿ

ಹರಿಹರ:(Harihara) ತಾಲ್ಲೂಕಿನ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ತುಂಗಭದ್ರಾ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು...

ದಾವಣಗೆರೆ

IGP: ವರದಿಗಾರರ ಮೇಲೆ ASP ದರ್ಪ: ಕ್ರಮಕ್ಕೆ ಒತ್ತಾಯಿಸಿ IGPಗೆ ಪತ್ರಕರ್ತರ ಮನವಿ

ದಾವಣಗೆರೆ:(IGP) ಹರಿಹರದ ಪಂಚಮಸಾಲಿ ಮಠದಲ್ಲಿ ನಡೆದ ಘಟನೆಯೊಂದರ ವರದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ದುರ್ವರ್ತನೆ ತೋರಿರುವುದನ್ನು ಖಂಡಿಸಿ...

Related Articles
ಅಪರಾಧದಾವಣಗೆರೆರಾಜ್ಯ / ಕರ್ನಾಟಕ

Medical: ಚಿತ್ರದುರ್ಗ ವೈದ್ಯಕೀಯ ಕಾಲೇಜಿನಲ್ಲಿ ಕೋಟಿಗೂ ಹೆಚ್ಚು ಹಣ ಲೂಟಿ: ಲೋಕಾಯುಕ್ತಕ್ಕೆ ದೂರು

ಚಿತ್ರದುರ್ಗ: (Medical College) ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಸಿಎಂಸಿಆರ್‌ಐ) ನಿರ್ದೇಶಕರಾದ...

ದಾವಣಗೆರೆರಾಜ್ಯ / ಕರ್ನಾಟಕ

Minister: ದಾವಣಗೆರೆ ಜಿಲ್ಲೆಗೆ ಎರಡು ಸಚಿವ ಸ್ಥಾನ, ಮಂಕಾಳ್ ವೈದ್ಯ ಬದಲಿಗೆ ಎಸ್ ಎಸ್ ಮಲ್ಲಿಕಾರ್ಜುನ ಸಂಪುಟ ಸೇರ್ಪಡೆ

ದಾವಣಗೆರೆ: (Minister) ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಸಂಪುಟ ಸಚಿವರನ್ನಾಗಿ ಸೇರಿಸಿಕೊಳ್ಳಲಾಗಿದೆ....

ರಾಜ್ಯ / ಕರ್ನಾಟಕ

BPL ಪಡಿತರ ಚೀಟಿ ಆದಾಯ ಮಿತಿ ₹3 ಲಕ್ಷಕ್ಕೆ ಹೆಚ್ಚಿಸಲು ಸರ್ಕಾರದ ಕ್ರಮ: ಸಚಿವ ಕೆ.ಎಚ್. ಮುನಿಯಪ್ಪ

ಬೆಂಗಳೂರು: (BPL) ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ (BPL) ಪಡಿತರ ಚೀಟಿ ಪಡೆಯಲು ಇರುವ ಪ್ರಸ್ತುತ...