ಮಹರಾಷ್ಟ್ರದ ಐವರು ಕಳ್ಳರ ಬಂಧನ: 30.20 ಲಕ್ಷ ರೂ. ಮೌಲ್ಯದ ಸ್ವತ್ತು ವಶ
![Five thieves arrested in Maharashtra: Rs 30.20 lakh Seizure of valuable assets](https://garudavoice.com/wp-content/uploads/2023/03/IMG-20230307-WA0000-e1678156381731.jpg)
ಮಹರಾಷ್ಟ್ರದ ಐವರು ಕಳ್ಳರ ಬಂಧನ: 30.20 ಲಕ್ಷ ರೂ. ಮೌಲ್ಯದ ಸ್ವತ್ತು ವಶ
ದಾವಣಗೆರೆ: ಅಂತರಾಜ್ಯ ಕಳ್ಳರನ್ನು ಬಂಧಿಸಿರುವ ಪೊಲೀಸರು 30.20 ಲಕ್ಷ ಮೌಲ್ಯದ ಗಾಲಿ ಹಾಗೂ ಲಾರಿಗಳನ್ನು ಸೋಮವಾರ ವಶ ಪಡಿಸಿಕೊಂಡಿದ್ದಾರೆ.
ಕಳೆದ ಜನವರಿ 287ರಂದು ಎ.ಎಂ.ಎಲ್. ಮೋಟಾರ್ ಪ್ರೈ ಲಿಮಿಟೆಡ್ ವರ್ಕ್ಶಾಪ್ನಲ್ಲಿ ಲಾರಿಯ ಟೈರುಗಳು, ಬ್ಯಾಟರಿಗಳು ಕಳ್ಳತನವಾದ ಬಗ್ಗೆ ದೂರು ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಮಹರಾಷ್ಟ್ರದ ಓಸ್ಮಾನಾಬಾದ್ ಜಿಲ್ಲೆಯ ವಾಶಿ ತಾಲ್ಲೂಕಿನ ಪ್ರಕಾಶ್ ನಾನಾ ಶಿಂಧೆ, ಅನಿಲ್ ಬಬನ್ ಶಿಂಧೆ, ದತ್ತಾ ಗೋವರ್ಧನ್ ಶಿಂಧೆ, ಸಂತಷ್ ಹಿಮ್ಮತ್ ಕಾಳಿ, ಉಮೇಶ್ ದಿಗಂಬರ್ ಲಾಖೆ ಅವರುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಆರೋಪಿತರಿಂದ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ 3 ಪ್ರಕರಣಗಳಲ್ಲಿ ಹಾಗೂ ವಿದ್ಯಾನಗರ ಠಾಣೆಯ 2 ಪ್ರಕರಣಗಳಲ್ಲಿ ಕಳ್ಳತನವಾದ ಅಂದಾಜು 8.20 ಲಕ್ಷ ರೂ. ಬೆಲೆಯ 22 ಟೈರುಗಳು ಹಾಗೂ ಕಳ್ಳತನ ಮಾಡಲು ಉಪಯೋಗಿಸಿದ 22 ಲಕ್ಷ ರೂ. ಬೆಲೆ ಬಾಳುವ ಎರಡು ಲಾರಿಗಳು ಸೇರಿ ಒಟ್ಟು 30.20 ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆ ನಡೆಸಿ ಆರೋಪಿತರ ಪತ್ತೆಯಲ್ಲಿ ಯಶಸ್ವಿಯಾದ ದಾವಣಗೆರೆ ಗ್ರಾಮಾಂತರ ಠಾಣೆಯ ಪಿಎಸ್ಐ ಹಾರೂನ್ ಅಕ್ಥರ್, ಎ.ಆರ್. ಹಾದಿಮನಿ, ಯಾಸೀನ್ ಉಲ್ಲಾ, ಎಎಸ್ಐ ಗುರುಶಾಂತಯ್ಯ, ಎಎಸ್ಐ ದವೇಂದ್ರನಾಯ್ಕ, ಹನುಮಂತ ಕವಾಡಿ, ಸೈಯದ್ ಗಫಾರ್, ಮಹ್ಮದ್ ಯೂಸೂಫ್ ಅತ್ತಾರ್, ಅಣ್ಣಯ್ಯ, ನಾಗರಾಜಯ್ಯ, ಮಾರುತಿ, ಮಂಜುನಾಥ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ರಾಘವೇಂದ್ರ, ಶಾಂತಕುಮಾರ್ ಅವರುಗಳನ್ನು ಎಸ್ಪಿ ಸಿ.ಬಿ. ರಿಷ್ಯಂತ್ ಹಾಗೂ ಹೆಚ್ಚುವರಿ ಎಸ್ಪಿ ಆರ್.ಬಿ ಬಸರಗಿ ಪ್ರಶಂಸಿಸಿದ್ದಾರೆ.