ಮಾ.21ರಿಂದ ಮರಳು ಕಳ್ಳರಿಂದ `ತುಂಗೆಯ ಒಡಲನ್ನು ಉಳಿಸಿ’ ಬೃಹತ್ ಪಾದಯಾತ್ರೆ

ಮಾ.21ರಿಂದ ಮರಳು ಕಳ್ಳರಿಂದ `ತುಂಗೆಯ ಒಡಲನ್ನು ಉಳಿಸಿ' ಬೃಹತ್ ಪಾದಯಾತ್ರೆ
ರಾಣೇಬೆನ್ನೂರು : ಮರಳು ಕಳ್ಳರೊಂದಿಗೆ ಕೈ ಜೋಡಿಸಿ ಕರ್ತವ್ಯಲೋಪ ಎಸಗಿ ಭ್ರಷ್ಟಾಚಾರ ಎಸಗುತ್ತಿರುವ ಅಧಿಕಾರಿಗಳ ಮೇಲೆ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿ, `ತುಂಗೆಯ ಒಡಲನ್ನು ಉಳಿಸಿ’ ಬೃಹತ್ ಪಾದಯಾತ್ರೆಯನ್ನು ಕರ್ನಾಟಕ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಎಫ್. ಪಾಟೀಲ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
ಇದೇ ಮಾರ್ಚ್ 21ರಂದು ಮಂಗಳವಾರ ರಾಣೇಬೆನ್ನೂರು ತಾಲ್ಲೂಕು ಮಾಕನೂರು ಕ್ರಾಸ್ನಿಂದ ನದಿಹರಳಹಳ್ಳಿ, ಐರಣಿ, ಹಿರೇಬಿದರಿ, ಚೀಲೂರು, ಚಿಕ್ಕಕುರುವತ್ತಿ, ಹರನಗಿರಿ, ಕುದರಿಹಾಳ, ಚಂದಾಪುರ ನದಿಪಾತ್ರದುದ್ದಕ್ಕೆ ನಡೆಯುವ ಬೃಹತ್ ಪಾದಯಾತ್ರೆ ನಡೆಯಲಿದೆ.
ಪಾದಯಾತ್ರಯೆಲ್ಲಿ ನಾಡಿನ ಪರಿಸರ ಹೋರಾಟಗಾರರು, ರೈತ ಮುಖಂಡರು ಭಾಗವಹಿಸುತ್ತಿದ್ದು, ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಮಾಕನೂರು ಕ್ರಾಸ್ ಬಳಿ ಮನವಿ ಸಲ್ಲಿಸಲಾಗುವುದು ಎಂದು ರವೀಂದ್ರಗೌಡ ಎಫ್. ಪಾಟೀಲ ತಿಳಿಸಿದ್ದಾರೆ.