ದಾವಣಗೆರೆಯ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಸಾಥ್ ನೀಡಿದ ಕೋತಿ ( ಮುಷ್ಯ)

ದಾವಣಗೆರೆ: ಬೆಣ್ಣೆ ನಗರಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಪ್ರಜಾ ಧ್ವನಿ ಯಾತ್ರೆ ಬೃಹತ್ ಸಮಾವೇಶ ನಡೆಯುತ್ತಿದ್ದು, ಕಾಂಗ್ರೆಸ್ ರಾಜ್ಯ ನಾಯಕರು ಬಂದಿರಲಿಲ್ಲ.. ಆದರೆ ಅಷ್ಟೊರೊಳಗೆ ಕೋತಿಯೊಂದು ವೇದಿಕೆ ಮೇಲೆ ಬಂದು ಕುಳಿತಿತು..ಈ ಸಂದರ್ಭದಲ್ಲಿ ವೇದಿಕೆ ಮೇಲೆ ಕುಳಿತಿದ್ದ ನಾಯಕರು ಕಕ್ಕಾಬಿಕ್ಕಿಯಾದರು.

ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಸಂಜೆ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿತ್ತು. ಅಷ್ಟೊರೊಳಗೆ ಕಾರ್ಯಕ್ರಮದ‌ ವೇದಿಕೆ ಬಳಿ ಕೋತಿಯೊಂದು ಕೆಲಕಾಲ ಕುಳಿತು ಜನರ ಗಮನ ಸೆಳೆಯಿತು.

ವೇದಿಕೆ ಮೇಲೆ ಮತ್ತು ಕೆಳಗೆ ಸಾವಿರಾರು ಜನರು ಇದ್ದರೂ ಯಾವುದೇ ಭಯವಿಲ್ಲದೆ ಮತ್ತು ಯಾರಿಗೂ ತೊಂದರೆ ಕೊಡದೇ ತನ್ನ ಪಾಡಿಗೆ ತಾನು ಅರ್ಧ ಗಂಟೆಗೂ ಹೆಚ್ಚು ಕಾಲ ಎಲ್ಲರ ಗಮನವನ್ನು ತನ್ನಡೆ ಸೆಳೆಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಬಿಸ್ಕತ್ ನೀಡಿದರು..ಬಿಸ್ಕತ್ ತಿಂದ ಕೋತಿ ನಂತರ ತನ್ನಪಾಡಿಗರ ತಾನು ಹೊರಟು ಹೋಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯರು ಕಾಂಗ್ರೆಸ್ ಸಮಾವೇಶಕ್ಕೆ‌ ಪ್ರಾಣಿಯೂ ಬೆಂಬಲ ನೀಡಿದೆ ಎಂದು ಮಾತನಾಡಿಕೊಂಡರು… ನಾಯಕರು ವೇದಿಕೆ ಬರುವಷ್ಟರಲ್ಲಿ ಕೋತಿ ಚಂಗನೆ ಹಾರಿತು.

Leave a Reply

Your email address will not be published. Required fields are marked *

error: Content is protected !!