ಸೊಳ್ಳೆ ಓಡಿಸಲು ಹಚ್ಚಿದ್ದ ಬತ್ತಿಯಿಂದ ಬೆಂಕಿ ತಗುಲಿ ವೃದ್ಧ ಸಾವು

ವೃದ್ಧ ಸಾವು

ನ್ಯಾಮತಿ: ಸೊಳ್ಳೆ ಓಡಿಸಲೆಂದು ಹಚ್ಚಿದ ಸೊಳ್ಳೆ ಬತ್ತಿಯಿಂದ ಬೆಂಕಿ ತಾಗಿ ವಯೋವೃದ್ಧರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಶಿವಮೊಗ್ಗದ ಮೇಗ್ಗಾನ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ತಾಲೂಕಿನ ಹೊಸಮಳಲಿ ಗ್ರಾಮದ ಎ.ಮಲ್ಲಪ್ಪ (85) ಫೆಬ್ರವರಿ 10 ರ ಶನಿವಾರ ರಾತ್ರಿ ಸೊಳ್ಳೆ ಓಡಿಸಲೆಂದು ಹಚ್ಚಿದ್ದ ಸೊಳ್ಳೆ ಬತ್ತಿಯಿಂದ ಬೆಂಕಿಯೂ ತಾಗಿ ರಾತ್ರಿ 12-30ರ ಸುಮಾರಿಗೆ ನಿದ್ರೆಯಲ್ಲಿದ್ದ ಮಲ್ಲಪ್ಪ ಅವರ ಬಟ್ಟೆಗೆ ಹತ್ತಿಕೊಂಡು ಹೊತ್ತಿ ಉರಿದಿದೆ.
ಬೆಂಕಿ ಗಮನಿಸಿ ಕುಟುಂಬಸ್ಥರೆಲ್ಲಾ ಸೇರಿ ಬೆಂಕಿ ನಂದಿಸಿ ಚಿಕಿತ್ಸೆಗಾಗಿ ಶಿವಮೊಗ್ಗ ಮೇಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು ವಯೋ ಸಹಜ ಸಮಸ್ಯೆಯಿಂದ ಹಾಗೂ ಬೆಂಕಿ ತಗುಲಿದ ಕಾರಣ ಚಿಕಿತ್ಸೆಗೆ ಸ್ಪಂದಿಸದೆ ಮಲ್ಲಪ್ಪ ಶನಿವಾರ ಬೆಳಗ್ಗೆ ನಿಧನ ಹೊಂದಿರುವುದಾಗಿ ಕುಟುಂಬಸ್ಥರು ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ನ್ಯಾಮತಿ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!