ಬೆಚ್ಚಿ ಬೀಳಿಸುವ ಸುದ್ದಿ ಇದು: ವಾಷಿಂಗ್ ಮಿಷನ್ ಹತ್ತಿರ ಅಡಗಿ ಕುಳಿತಿತ್ತು ನಾಗರಹಾವಿನ ಮರಿ
![](https://garudavoice.com/wp-content/uploads/2021/07/IMG-20210701-WA0028.jpg)
ಶಿವಮೊಗ್ಗ: ಮನೆಯೊಂದರ ಹಿಂಬದಿಯ ಕೊಠಡಿಯಲ್ಲಿ ಇರಿಸಲಾಗಿದ್ದ ವಾಷಿಂಗ್ ಮಿಷನ್
ಬಳಿ ಅಡಗಿ ಕುಳಿತಿದ್ದ ನಾಗರ ಹಾವಿನ ಮರಿಯನ್ನು, ಉರಗ ತಜ್ಞ ಸ್ನೇಕ್ ಕಿರಣ್ ರವರು
ಸುರಕ್ಷಿತವಾಗಿ ಸೆರೆ ಹಿಡಿದ ಘಟನೆ ಗುರುವಾರ ಬೆಳಿಗ್ಗೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಕೋಟೆ ರಸ್ತೆಯ ನಿವಾಸಿ ಅಶ್ವಥ್ ಎಂಬುವರ ಮನೆಯಲ್ಲಿ ಈ ಹಾವಿನ ಮರಿ ಕಾಣಿಸಿಕೊಂಡಿತ್ತು.
ಭಯಭೀತರಾದ ಕುಟುಂಬದ ಸದಸ್ಯರು ಸ್ನೇಕ್ ಕಿರಣ್ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಕಿರಣ್ ಕೆಲ ನಿಮಿಷಗಳಲ್ಲಿಯೇ ಸುರಕ್ಷಿತವಾಗಿ ಹಾವಿನ ಮರಿಯನ್ನು
ಹಿಡಿಯುವಲ್ಲಿ ಸಫಲರಾಗಿದ್ದಾರೆ. ಇದನ್ನು ನಗರದ ಹೊರವಲಯದ ನಿರ್ಜನ ಪ್ರದೇಶದಲ್ಲಿ
ಬಿಡಲಾಯಿತು ಎಂದು ಕಿರಣ್ ರವರು ಮಾಹಿತಿ ನೀಡಿದ್ದಾರೆ.
ಹಾವುಗಳು ಪ್ರಕೃತಿಯ ಅಪರೂಪದ ಜೀವ ಸೃಷ್ಟಿಯಲ್ಲೊಂದಾಗಿದೆ. ಯಾವುದೇ ಕಾರಣಕ್ಕೂ
ಅವುಗಳನ್ನು ಹೊಡೆದು ಸಾಯಿಸುವುದು, ಹಿಂಸಿಸುವುದು ಮಾಡಬಾರದು ಎಂದಿದ್ದಾರೆ.