ವರಸದ್ಯೋಜಾತ ಶ್ರೀಗಳ ಭೇಟಿಮಾಡಿದ ಶಾಸಕ ಇ.ತುಕಾರಾಂ
![](https://garudavoice.com/wp-content/uploads/2021/06/IMG-20210628-WA0012.jpg)
ಹರಪನಹಳ್ಳಿ. ಜೂ.೨೮;
ಸಂಡೂರು ತಾಲ್ಲೂಕಿನ ಶಾಸಕರು ಹಾಗೂ ಮಾಜಿ ಶಿಕ್ಷಣ ಸಚಿವರಾದ ಇ.ತುಕಾರಾಂ ಅವರು ಖಾಸಗಿ ಕಾರ್ಯದ ನೀಮಿತ್ಯ ಹರಪನಹಳ್ಳಿಯ ತೆಗ್ಗಿನಮಠದ ಷ.ಬ್ರ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು.
ಈ ಸಂದರ್ಭದಲ್ಲಿ ಶ್ರೀ ಮಠದ ಕಾರ್ಯದರ್ಶಿಗಳಾದ ಟಿ.ಎಂ.ಚಂದ್ರಶೇಖರಯ್ಯ ಸೇರಿದಂತೆ ಹರಪನಹಳ್ಳಿ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರಾದ ಟಿ.ವೆಂಕಟೇಶ, ತೆಲಗಿ ಉಮಾಕಾಂತ, ಮಹಾಂತೇಶ ನಾಯ್ಕ, ತೆಲಿಗಿ ಮಂಜುನಾಥ, ಹಾಗೂ ವಿದ್ಯಾರ್ಥಿ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು