ದಾವಣಗೆರೆ

Panchamasali: ಹರಿಹರ ಪಂಚಮಸಾಲಿ ಪೀಠದಲ್ಲಿ ‘ಲೆಕ್ಕದ’ ಸಮರ! ಸ್ವಾಮೀಜಿ vs ಟ್ರಸ್ಟಿಗಳ ನೇರ ಹಣಾಹಣಿ!

Share
Share

ದಾವಣಗೆರೆ: (Panchamasali) ದಾವಣಗೆರೆ ಜಿಲ್ಲೆಯ ಹರಿಹರ ಪಂಚಮಸಾಲಿ ಮಠದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಈಗ ಬೀದಿಗೆ ಬಂದಿದೆ. ವಚನಾನಂದ ಸ್ವಾಮೀಜಿ ಹಾಗೂ ಮಠದ ಟ್ರಸ್ಟಿಗಳ ನಡುವಿನ ಸಮರ ತಾರಕಕ್ಕೇರಿದ್ದು, ‘ಲೆಕ್ಕ ಕೊಡುವ’ ಕಾರ್ಯಕ್ರಮದಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. “ತಾಕತ್ ಇದ್ರೆ ಬಾರೋ ನೋಡ್ಕೊಳ್ತೀನಿ” ಎಂದು ಟ್ರಸ್ಟಿಯೊಬ್ಬರು ಬಹಿರಂಗವಾಗಿಯೇ ಸವಾಲು ಹಾಕಿದ್ದಾರೆ!

*ಭಾಗ 1: ವೇದಿಕೆ ಮೇಲೆ ವಾಗ್ವಾದ ಮತ್ತು ಸವಾಲು*

ಮಠದ ಹಣಕಾಸಿನ ವಿಚಾರವಾಗಿ ಸ್ವಾಮೀಜಿ ಮಾಡಿದ್ದ ಭ್ರಷ್ಟಾಚಾರದ ಆರೋಪಕ್ಕೆ ಉತ್ತರ ನೀಡಲು ಟ್ರಸ್ಟಿಗಳು ‘ಲೆಕ್ಕ ಕೊಡುವ ಅಭಿಯಾನ’ ಹಮ್ಮಿಕೊಂಡಿದ್ದರು. ಪ್ರಧಾನ ಧರ್ಮದರ್ಶಿ *ಬಿಸಿ ಉಮಾಪತಿ* ಲೆಕ್ಕ ಮಂಡಿಸುತ್ತಿದ್ದಾಗ, ಸ್ವಾಮೀಜಿ ಬೆಂಬಲಿಗರು ಅಡ್ಡಿಪಡಿಸಿದರು. ಈ ವೇಳೆ ಸಿಡಿದೆದ್ದ ಟ್ರಸ್ಟಿ *ಹೆಚ್.ಎಸ್. ನಾಗರಾಜ್*
*“ನಾನು ಮಾಜಿ ಸಚಿವ ಶಿವಪ್ಪನ ಮಗ! ತಾಕತ್ ಇದ್ರೆ ವೇದಿಕೆ ಮೇಲೆ ಬನ್ನಿ, ಅಲ್ಲೇ ನೋಡ್ಕೊಳ್ತೀನಿ. ಸಮಾಜ ಇಬ್ಬಾಗ ಮಾಡ್ತಿರೋ ಆ ಸ್ವಾಮಿಯಿಂದಲೇ ಇಷ್ಟೆಲ್ಲಾ ರಾದ್ಧಾಂತ ಆಗ್ತಿರೋದು”* ಎಂದು ಗುಡುಗಿದರು.

*ಭಾಗ 2: ಹಲ್ಲೆ ಆರೋಪ ಮತ್ತು ಘೋಷಣೆಗಳ ಅಬ್ಬರ*
ಲೆಕ್ಕ ಕೇಳಲು ಬಂದಿದ್ದ ಯುವ ಘಟಕದ ಕಾರ್ಯಾಧ್ಯಕ್ಷ *ಶಿವನಗೌಡ ಪಾಟೀಲ್* ಮೇಲೆ ಟ್ರಸ್ಟಿಗಳ ಬೆಂಬಲಿಗರು ಹಲ್ಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ರೊಚ್ಚಿಗೆದ್ದ ಸ್ವಾಮೀಜಿ ಅಭಿಮಾನಿಗಳು “ಟ್ರಸ್ಟಿಗಳೆಲ್ಲಾ ಕಳ್ಳರು” ಎಂದು ಘೋಷಣೆ ಕೂಗಿದರು. ಬಿಸಿ ಉಮಾಪತಿ ನೀಡುತ್ತಿರುವುದು “ಕಳ್ಳ ಲೆಕ್ಕ” ಎಂದು ಆಕ್ರೋಶ ಹೊರಹಾಕಿದರು. ವೇದಿಕೆಯತ್ತ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು.

*ಭಾಗ 3: ಕೇಂದ್ರ ಸಚಿವ ವಿ. ಸೋಮಣ್ಣ ಎಂಟ್ರಿ!*
ಸಂಘರ್ಷ ತಾರಕಕ್ಕೇರುತ್ತಿದ್ದಂತೆ ಕೇಂದ್ರ ಸಚಿವ *ವಿ. ಸೋಮಣ್ಣ* ಅವರು ಬಿಸಿ ಉಮಾಪತಿ ಅವರಿಗೆ ಕರೆ ಮಾಡಿ ಸಮಾಧಾನಪಡಿಸಲು ಯತ್ನಿಸಿದರು. ಆದರೆ ಉಮಾಪತಿ ಮಾತ್ರ ಪಟ್ಟು ಸಡಿಲಿಸಲಿಲ್ಲ *“ಸೋಮಣ್ಣನವರೇ, ಇಲ್ಲಿ ನಮ್ಮ ಮರ್ಯಾದೆ ಪ್ರಶ್ನೆ ಇದೆ. ಮುರುಗೇಶ್ ನಿರಾಣಿ ಹಾಗೂ ನಿಮ್ಮ ಮಾತಿಗಾಗಿ ಇಷ್ಟು ದಿನ ಸುಮ್ಮನಿದ್ದೆವು. ಆದರೆ ಸ್ವಾಮೀಜಿ ನಮ್ಮ ಮೇಲೆ ಸವಾರಿ ಮಾಡುವುದನ್ನು ಸಹಿಸಲ್ಲ. ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ”* ಎಂದು ಫೋನ್‌ನಲ್ಲೇ ಖಡಕ್ ಆಗಿ ಪ್ರತಿಕ್ರಿಯಿಸಿದರು.

ಸದ್ಯ ಹರಿಹರ ಮಠದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಮಠದ ಆವರಣದಾದ್ಯಂತ ಪೊಲೀಸ್ ಕಾವಲು ಹಾಕಲಾಗಿದ್ದು, ಭಕ್ತ ಸಮೂಹ ಈ ಬೆಳವಣಿಗೆಯಿಂದ ತೀವ್ರ ಆತಂಕಕ್ಕೆ ಒಳಗಾಗಿದೆ. ಮಠದ ಗೌರವ ಕಾಪಾಡಬೇಕಾದವರೇ ಹೀಗೆ ಬೀದಿಯಲ್ಲಿ ಜಗಳವಾಡುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

*ವರದಿ:- ಹೆಚ್ ಎಂ ಪಿ ಕುಮಾರ್, Copyright Protected*

Share

Leave a comment

Leave a Reply

Your email address will not be published. Required fields are marked *

Don't Miss

ರಾಜ್ಯ / ಕರ್ನಾಟಕ

BASAVA: ಜಾತಿವ್ಯವಸ್ಥೆಯಿರುವವೆಗೂ ಬಸವ ತತ್ವಗಳು ಪ್ರಸ್ತುತವಾಗಿರುತ್ತವೆ- ಮುಖ್ಯಮಂತ್ರಿ ಸಿದ್ದರಾಮಯ್ಯ

(BASAVA)ಲಿಂಗಾಯತ ಧರ್ಮ ಸಮಾನತೆ ಹಾಗೂ ಮಾನವೀಯತೆಯಿಂದ ಕೂಡಿದೆ* *ಜಾತಿವ್ಯವಸ್ಥೆ ನಿರ್ಮೂಲನೆಗೆ ವೈಚಾರಿಕ ವೈಜ್ಞಾನಿಕ ಶಿಕ್ಷಣ ಅಗತ್ಯ* ಮೈಸೂರು: (BASAVA) ಚಲನೆಯಿಲ್ಲದ ಜಾತಿವ್ಯವಸ್ಥೆ ಇರುವವೆರೆಗೂ ಬಸವಣ್ಣನವರ ತತ್ವಗಳು ಪ್ರಸ್ತುತವಾಗಿರುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...

ರಾಜ್ಯ / ಕರ್ನಾಟಕ

CM: ದೇವರನ್ನು ನಂಬಿ, ಮೂಢನಂಬಿಕೆಗಳನ್ನು ತ್ಯಜಿಸಿ: ಸಿಎಂ ಸಿದ್ದರಾಮಯ್ಯ ಕರೆ

CM: ಮಾನವ ಸಮಾಜ ನಿರ್ಮಾಣದಲ್ಲಿ ಎಲ್ಲರೂ ಪಾಲುದಾರರಾಗಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಣೇಬೆನ್ನೂರು: ಮಾನವ ಸಮಾಜ ನಿರ್ಮಾಣದಲ್ಲಿ ಎಲ್ಲರೂ ಪಾಲುದಾರರಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ಅವರು ಇಂದು ರಾಣಿಬೆನ್ನೂರಿನ ನಿಟ್ಟೂರು ಗ್ರಾಮದಲ್ಲಿ...

Related Articles
ದಾವಣಗೆರೆ

Davanagere: ದಾವಣಗೆರೆಯಲ್ಲಿ ಪ್ರಥಮ ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ: ಪೂರ್ವಭಾವಿ ಸಭೆ ಯಶಸ್ವಿ

ದಾವಣಗೆರೆ: (Davanagere) ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಆಯೋಜಿಸಲು ಉದ್ದೇಶಿಸಿರುವ...

ದಾವಣಗೆರೆರಾಜ್ಯ / ಕರ್ನಾಟಕ

Transfer: ಕಂದಾಯ ಇಲಾಖೆ ಅಧಿಕಾರಿಗಳ ವರ್ಗಾವಣೆ: ದಾವಣಗೆರೆ ಜಿಲ್ಲೆಯ ವಿವರಗಳು

ದಾವಣಗೆರೆ: (Transfer) ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ರಾಜ್ಯದ ಹಲವು ತಹಶೀಲ್ದಾರ್‌ಗಳನ್ನು ವರ್ಗಾವಣೆ ಮಾಡಿ ಇಂದು...

ದಾವಣಗೆರೆಅಪರಾಧರಾಜ್ಯ / ಕರ್ನಾಟಕ

Road: ರಸ್ತೆ ಸುರಕ್ಷತೆ ಮತ್ತು ಕಾನೂನುಬದ್ಧ ವಾಹನ ನಿರ್ವಹಣೆ. ದ್ವಿಚಕ್ರ ವಾಹನಗಳಿಗೆ ಸೀಮಿತವಾದ ತಪಾಸಣೆ.!

ದಾವಣಗೆರೆ: ( Road) ಭಾರತೀಯ ರಸ್ತೆಗಳಲ್ಲಿ ಸಂಚರಿಸುವ ಪ್ರತಿ ವಾಹನವು ನಿರ್ದಿಷ್ಟ ಸುರಕ್ಷತಾ ಮಾನದಂಡಗಳಿಗೆ ಒಳಪಟ್ಟಿರುತ್ತದೆ....