ದಾವಣಗೆರೆ

Panchamasali: ಹರಿಹರ ಪಂಚಮಸಾಲಿ ಪೀಠದಲ್ಲಿ ‘ಲೆಕ್ಕದ’ ಸಮರ! ಸ್ವಾಮೀಜಿ vs ಟ್ರಸ್ಟಿಗಳ ನೇರ ಹಣಾಹಣಿ!

Share
Share

ದಾವಣಗೆರೆ: (Panchamasali) ದಾವಣಗೆರೆ ಜಿಲ್ಲೆಯ ಹರಿಹರ ಪಂಚಮಸಾಲಿ ಮಠದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಈಗ ಬೀದಿಗೆ ಬಂದಿದೆ. ವಚನಾನಂದ ಸ್ವಾಮೀಜಿ ಹಾಗೂ ಮಠದ ಟ್ರಸ್ಟಿಗಳ ನಡುವಿನ ಸಮರ ತಾರಕಕ್ಕೇರಿದ್ದು, ‘ಲೆಕ್ಕ ಕೊಡುವ’ ಕಾರ್ಯಕ್ರಮದಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. “ತಾಕತ್ ಇದ್ರೆ ಬಾರೋ ನೋಡ್ಕೊಳ್ತೀನಿ” ಎಂದು ಟ್ರಸ್ಟಿಯೊಬ್ಬರು ಬಹಿರಂಗವಾಗಿಯೇ ಸವಾಲು ಹಾಕಿದ್ದಾರೆ!

*ಭಾಗ 1: ವೇದಿಕೆ ಮೇಲೆ ವಾಗ್ವಾದ ಮತ್ತು ಸವಾಲು*

ಮಠದ ಹಣಕಾಸಿನ ವಿಚಾರವಾಗಿ ಸ್ವಾಮೀಜಿ ಮಾಡಿದ್ದ ಭ್ರಷ್ಟಾಚಾರದ ಆರೋಪಕ್ಕೆ ಉತ್ತರ ನೀಡಲು ಟ್ರಸ್ಟಿಗಳು ‘ಲೆಕ್ಕ ಕೊಡುವ ಅಭಿಯಾನ’ ಹಮ್ಮಿಕೊಂಡಿದ್ದರು. ಪ್ರಧಾನ ಧರ್ಮದರ್ಶಿ *ಬಿಸಿ ಉಮಾಪತಿ* ಲೆಕ್ಕ ಮಂಡಿಸುತ್ತಿದ್ದಾಗ, ಸ್ವಾಮೀಜಿ ಬೆಂಬಲಿಗರು ಅಡ್ಡಿಪಡಿಸಿದರು. ಈ ವೇಳೆ ಸಿಡಿದೆದ್ದ ಟ್ರಸ್ಟಿ *ಹೆಚ್.ಎಸ್. ನಾಗರಾಜ್*
*“ನಾನು ಮಾಜಿ ಸಚಿವ ಶಿವಪ್ಪನ ಮಗ! ತಾಕತ್ ಇದ್ರೆ ವೇದಿಕೆ ಮೇಲೆ ಬನ್ನಿ, ಅಲ್ಲೇ ನೋಡ್ಕೊಳ್ತೀನಿ. ಸಮಾಜ ಇಬ್ಬಾಗ ಮಾಡ್ತಿರೋ ಆ ಸ್ವಾಮಿಯಿಂದಲೇ ಇಷ್ಟೆಲ್ಲಾ ರಾದ್ಧಾಂತ ಆಗ್ತಿರೋದು”* ಎಂದು ಗುಡುಗಿದರು.

*ಭಾಗ 2: ಹಲ್ಲೆ ಆರೋಪ ಮತ್ತು ಘೋಷಣೆಗಳ ಅಬ್ಬರ*
ಲೆಕ್ಕ ಕೇಳಲು ಬಂದಿದ್ದ ಯುವ ಘಟಕದ ಕಾರ್ಯಾಧ್ಯಕ್ಷ *ಶಿವನಗೌಡ ಪಾಟೀಲ್* ಮೇಲೆ ಟ್ರಸ್ಟಿಗಳ ಬೆಂಬಲಿಗರು ಹಲ್ಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ರೊಚ್ಚಿಗೆದ್ದ ಸ್ವಾಮೀಜಿ ಅಭಿಮಾನಿಗಳು “ಟ್ರಸ್ಟಿಗಳೆಲ್ಲಾ ಕಳ್ಳರು” ಎಂದು ಘೋಷಣೆ ಕೂಗಿದರು. ಬಿಸಿ ಉಮಾಪತಿ ನೀಡುತ್ತಿರುವುದು “ಕಳ್ಳ ಲೆಕ್ಕ” ಎಂದು ಆಕ್ರೋಶ ಹೊರಹಾಕಿದರು. ವೇದಿಕೆಯತ್ತ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು.

*ಭಾಗ 3: ಕೇಂದ್ರ ಸಚಿವ ವಿ. ಸೋಮಣ್ಣ ಎಂಟ್ರಿ!*
ಸಂಘರ್ಷ ತಾರಕಕ್ಕೇರುತ್ತಿದ್ದಂತೆ ಕೇಂದ್ರ ಸಚಿವ *ವಿ. ಸೋಮಣ್ಣ* ಅವರು ಬಿಸಿ ಉಮಾಪತಿ ಅವರಿಗೆ ಕರೆ ಮಾಡಿ ಸಮಾಧಾನಪಡಿಸಲು ಯತ್ನಿಸಿದರು. ಆದರೆ ಉಮಾಪತಿ ಮಾತ್ರ ಪಟ್ಟು ಸಡಿಲಿಸಲಿಲ್ಲ *“ಸೋಮಣ್ಣನವರೇ, ಇಲ್ಲಿ ನಮ್ಮ ಮರ್ಯಾದೆ ಪ್ರಶ್ನೆ ಇದೆ. ಮುರುಗೇಶ್ ನಿರಾಣಿ ಹಾಗೂ ನಿಮ್ಮ ಮಾತಿಗಾಗಿ ಇಷ್ಟು ದಿನ ಸುಮ್ಮನಿದ್ದೆವು. ಆದರೆ ಸ್ವಾಮೀಜಿ ನಮ್ಮ ಮೇಲೆ ಸವಾರಿ ಮಾಡುವುದನ್ನು ಸಹಿಸಲ್ಲ. ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ”* ಎಂದು ಫೋನ್‌ನಲ್ಲೇ ಖಡಕ್ ಆಗಿ ಪ್ರತಿಕ್ರಿಯಿಸಿದರು.

ಸದ್ಯ ಹರಿಹರ ಮಠದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಮಠದ ಆವರಣದಾದ್ಯಂತ ಪೊಲೀಸ್ ಕಾವಲು ಹಾಕಲಾಗಿದ್ದು, ಭಕ್ತ ಸಮೂಹ ಈ ಬೆಳವಣಿಗೆಯಿಂದ ತೀವ್ರ ಆತಂಕಕ್ಕೆ ಒಳಗಾಗಿದೆ. ಮಠದ ಗೌರವ ಕಾಪಾಡಬೇಕಾದವರೇ ಹೀಗೆ ಬೀದಿಯಲ್ಲಿ ಜಗಳವಾಡುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

*ವರದಿ:- ಹೆಚ್ ಎಂ ಪಿ ಕುಮಾರ್, Copyright Protected*

Share

Leave a comment

Leave a Reply

Your email address will not be published. Required fields are marked *

Related Articles
ದಾವಣಗೆರೆ

IGP: ವರದಿಗಾರರ ಮೇಲೆ ASP ದರ್ಪ: ಕ್ರಮಕ್ಕೆ ಒತ್ತಾಯಿಸಿ IGPಗೆ ಪತ್ರಕರ್ತರ ಮನವಿ

ದಾವಣಗೆರೆ:(IGP) ಹರಿಹರದ ಪಂಚಮಸಾಲಿ ಮಠದಲ್ಲಿ ನಡೆದ ಘಟನೆಯೊಂದರ ವರದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಹೆಚ್ಚುವರಿ...

ದಾವಣಗೆರೆ

Harihara: ಹರಿಹರ ಪಂಚಮಸಾಲಿ ಮಠದಲ್ಲಿ ಟ್ರಸ್ಟಿಗಳ ಬಂಡಾಯ: ಸಂಘಕ್ಕೆ ನಮ್ಮನ್ನು ಉಚ್ಚಾಟಿಸಲು ಅಧಿಕಾರವಿಲ್ಲ – ಬಿ ಸಿ ಉಮಾಪತಿ

Harihara: ಹರಿಹರ ಪಂಚಮಸಾಲಿ ಮಠದಲ್ಲಿ ಟ್ರಸ್ಟಿಗಳ ಬಂಡಾಯ: ಸಂಘಕ್ಕೆ ನಮ್ಮನ್ನು ಉಚ್ಚಾಟಿಸಲು ಅಧಿಕಾರವಿಲ್ಲ ದಾವಣಗೆರೆ:(Harihara) ಹರಿಹರ...

ದಾವಣಗೆರೆ

Expell: ಬಿ.ಸಿ. ಉಮಾಪತಿ, ಚಂದ್ರಶೇಖರ್ ಪೂಜಾರ್, ಮತ್ತು ಜ್ಯೋತಿ ಪ್ರಕಾಶ್ ಟ್ರಸ್ಟ್‌ನಿಂದ ಉಚ್ಚಾಟನೆ: ಸೋಮನಗೌಡ ಎಂ. ಪಟೀಲ್

ದಾವಣಗೆರೆ: (Expell) ಹರಿಹರದ ಪಂಚಮಸಾಲಿ ಪೀಠದ ಟ್ರಸ್ಟ್‌ನ ಮೂವರು ಪ್ರಮುಖ ಪದಾಧಿಕಾರಿಗಳನ್ನು ಉಚ್ಚಾಟಿಸಲಾಗಿದೆ ಎಂದು ಕರ್ನಾಟಕ...

ದಾವಣಗೆರೆ

Trust: ಹರಿಹರ ಪಂಚಮಸಾಲಿ ಪೀಠದಲ್ಲಿ ಕಿಚ್ಚು: ಲೆಕ್ಕ ಕೊಟ್ಟು ಮಠಕ್ಕೆ ಕಾಲಿಡಿ ಎಂದು ಟ್ರಸ್ಟಿಗಳಿಗೆ ಹೆಚ್ ಎಸ್ ಶಿವಶಂಕರ್ ಎಚ್ಚರಿಕೆ!

ದಾವಣಗೆರೆ:(Trust)" ಮಠದ ಆಸ್ತಿ ಮತ್ತು ಹಣಕ್ಕೆ ಲೆಕ್ಕ ಕೇಳುವ ಹಕ್ಕು ಸಮಾಜದ ಪ್ರತಿಯೊಬ್ಬರಿಗೂ ಇದೆ. ಲೆಕ್ಕ...