ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಡಿ. ರಾಮಾನಾಯಕ್‌ಗೆ ಸನ್ಮಾನ

ದಾವಣಗೆರೆ: ಆಲ್ ಇಂಡಿಯಾ ಬಂಜಾರಾ ಸೇವಾ ಸಂಘ ಹಾಸನ ಜಿಲ್ಲಾ ಘಟಕದ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಡಿ. ರಾಮಾನಾಯಕ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಂಘಟ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಡಿ.ರಾಮಾ ನಾಯಕ ಸನ್ಮಾನ ಸ್ವೀಕರಿಸಿ ಮಾತನಾಡಿ, ತಮ್ಮ ಜೀವನದಲ್ಲಿ ನಡೆದು ಬಂದ ಹಾದಿಯ ಬಗ್ಗೆ ಹಾಗೂ ಸಮಾಜದ ಏಳಿಗೆಗಾಗಿ ಹಮ್ಮಿಕೊಂಡ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಪುಟ್ಟಾನಾಯಕ, ಜಿಲ್ಲಾಧ್ಯಕ್ಷ ಸೋಮನಾಯಕ್, ಕೃಷ್ಣದಾಸ ದಲಿತ ಸಂಘಟನೆಗಳ ಸಂಚಾಲಕರು, ಪದ್ಮನಾಭ್ ಸಾರಿಗೆ ಇಲಾಖೆ, ಡಾ. ಜಗದೀಶ್ ನಾಯಕ ಶಿಕ್ಷಣ ಇಲಾಖೆ, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಶೈಲಾ ನಾಯಕ್, ಜಿಲ್ಲಾಧ್ಯಕ್ಷೆ ಮಂಜುಳಾಬಾಯಿ, ಮಂಜಾನಾಯಕ, ನಾಗರಾಜ ನಾಯಕ್ ತೋಟಗಾರಿಕೆ ಇಲಾಖೆ, ಡಾ.ಸತೀಶ್ ನಾಯಕ್, ಡಾ. ಚಂದ್ರಾ ನಾಯಕ್, ರಘು ನಾಯಕ್ ಚಿನ್ನದ ಪದಕ ವಿಜೇತರು, ರಾಜಮಲ್ ನಾಯಕ್, ಮೋಹನ ಕುಮಾರ, ಡಿ. ಕುಮಾರ, ವಿವಿಧ ತಾಲೂಕು ಅಧ್ಯಕ್ಷರುಗಳಾದ ಸುನಿಲ್ ನಾಯಕ್, ಗಣೇಶ ನಾಯಕ್, ಕುಮಾರ ನಾಯಕ್, ಚಂದ್ರಾ ನಾಯಕ್ ಹಾಗೂ ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *

error: Content is protected !!