ರಾಜ್ಯ ಸುದ್ದಿ

farmer; ನೀರಿಲ್ಲ, ಮೇವಿಲ್ಲ…ಸರ್ಕಾರವೇ, ರೈತರ ಬವಣೆ ಕೇಳಿ ಸ್ವಲ್ಪ!

ಚಿತ್ರದುರ್ಗ, ಸೆ.02: ಸರ್ಕಾರ ಕೂಡಲೇ ರೈತರ (farmer) ಬಗ್ಗೆ ದನಕರುಗಳ ಬಗ್ಗೆ ಕಾಳಜಿಯನ್ನು ವಹಿಸಿ ಪ್ರತಿ ರೈತರಿಗೂ ಪರಿಹಾರವನ್ನು ಒದಗಿಸಿಕೊಡಬೇಕು ಎಂದು ಜಿಲ್ಲಾ ನಾಯಕ ಸಮುದಾಯದ ಹಿರಿಯ ಮುಖಂಡರು ಕಾಂಗ್ರೆಸ್ ಮುಖಂಡ ತಿಪ್ಪೇಸ್ವಾಮಿ. ಎಮ್ ಆಗ್ರಹಿಸಿದರು.

ಚಿತ್ರದುರ್ಗ ತಾ ಚಿಕ್ಕಬೇನ್ನುರು ಗ್ರಾಮ ಪಂಚಾಯತ್ ವ್ಯಾಪ್ತಿಯ ಲಿಂಗವ್ವನಾಗತಿಹಳ್ಳಿ ಮತ್ತು ಕರಿಯಮ್ಮನಹಟ್ಟಿಯಲ್ಲಿ ಮಳೆ ಬಾರದ ಕಾರಣ ರೈತರು ಬಿತ್ತನೆ ಮಾಡಿದಂತಹ ಬೆಳೆಗಳು ಒಣಗಿದ್ದು ಕಂಗಲಾಗಿದ್ದಾರೆ. ದನಕರುಗಳಿಗೆ ಮೇವು ಇಲ್ಲದಂತಾಗಿ ಹಸಿವಿನಿಂದ ಇರುವಂತಾಗಿದ್ದು, ರೈತರು ಚಿಂತೆಗೀಡಾಗಿದ್ದಾರೆ.

ಈ ಪರಿಸ್ಥಿತಿ ಇದೇ ರೀತಿ ಮುಂದಿನ ದಿನಗಳಲ್ಲಿ ಮುಂದುವರೆದಲ್ಲಿ ದನಕರುಗಳಿಗೆ ರೈತರು ಯಾವ ರೀತಿಯಾಗಿ ಅವುಗಳನ್ನು ಸಾಕಬೇಕು ಎಂದು ಹಳ್ಳಿ ಜನಗಳು ವ್ಯಥೆ ಪಡುತ್ತಿದ್ದಾರೆ. ಹಾಗಾಗಿ ಸರ್ಕಾರ ಕೂಡಲೇ ರೈತರು, ದನಕರುಗಳ ಬಗ್ಗೆ ಕಾಳಜಿಯನ್ನು ವಹಿಸಿ ಪ್ರತಿ ರೈತರಿಗೂ ಪರಿಹಾರವನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

Nagaraj Talavar; ಮುರಿದ ಕನಸಿಗೆ ಮತ್ತೆ ಮರುಗುತ್ತಿದೆ ಮರು ಜೀವದ ಮನಸ್ಸು!

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!