ದಾವಣಗೆರೆ ಜಿಲ್ಲೆಯಲ್ಲಿ ಕಿಚ್ಚನ ಹವಾ: ವಾಲ್ಮೀಕಿ ಸಮಾಜದ ಮತಬೇಟೆಗೆ ಲಗ್ಗೆ ಇಟ್ಟ ಸುದೀಪ್ ರೋಡ್ ಶೋ

ದಾವಣಗೆರೆ ಜಿಲ್ಲೆಯಲ್ಲಿ ಕಿಚ್ಚನ ಹವಾ: ವಾಲ್ಮೀಕಿ ಸಮಾಜದ ಮತಬೇಟೆಗೆ ಲಗ್ಗೆ ಇಟ್ಟ ಸುದೀಪ್ ರೋಡ್ ಶೋ

ದಾವಣಗೆರೆ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜಿಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರನ ನಡೆಸಲು ಖ್ಯಾತ ಚಿತ್ರನಟ ಕಿಚ್ಚ ಸುದೀಪ್ ಜಿಲ್ಲೆಗೆ ಆಗಮಿಸಿದ್ದಾರೆ.

ನಾಯಕ ಸಮುದಾಯದ ಯುವಕರ ಮತಗಳನ್ನ ಬಿಜೆಪಿ ಪರ ಪರಿವರ್ತನೆಗೆ ಮುಂದಾಗಿರುವ ಸುದೀಪ್, ಜಗಳೂರು, ಮಾಯಕೊಂಡ ಹಾಗೂ ದಾವಣಗೆರೆ ಕ್ಷೇತ್ರಗಳಲ್ಲಿ ಇಂದು ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.

ನಾಯಕ ಸಮುದಾಯದ ಓಟ್ ಬ್ಯಾಂಕ್ ಲಗ್ಗೆ ಇಟ್ಟಿರುವ ಬಿಜೆಪಿ ಪರ ಕಿಚ್ಚ ಸುದೀಪ್, ಜಗಳೂರು ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ ರಾಮಚಂದ್ರಪ್ಪ ಪರ ರೋಡ್ ಶೋ ಮೂಲಕ ಪ್ರಚಾರ ನಡೆಸಲಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಕಿಚ್ಚನ ಹವಾ: ವಾಲ್ಮೀಕಿ ಸಮಾಜದ ಮತಬೇಟೆಗೆ ಲಗ್ಗೆ ಇಟ್ಟ ಸುದೀಪ್ ರೋಡ್ ಶೋ

ನಂತರ ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ತ್ಯಾವಣಗಿಯಲ್ಲಿ ಮಾಯಕೊಂಡ ಎಸ್ ಸಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ನಾಯ್ಕ್ ಪರ ಪ್ರಚಾರ ಮಾಡಲಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಜಿ. ಅಜಯ್ ಕುಮಾರ್ ಪರ ಹದಡಿ ಗ್ರಾಮದಲ್ಲಿ ರೋಡ್ ಶೋ ನಡೆಸಿ, ನಂತರ ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಪರ ದಾವಣಗೆರೆ ನಗರದ ದುರ್ಗಾಂಬಿಕಾ ದೇವಸ್ಥಾನದಿಂದ ಹೆಚ್ ಕೆ ಆರ್ ವೃತ್ತದವರೆಗೆ ಮಧ್ಯಾಹ್ನ 4:30 ಕ್ಕೆ ರೋಡ್ ಶೋ ನಡೆಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!