ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುವುದಿಲ್ಲ: ದಾಣಗೆರೆಯಲ್ಲಿ ಸಚಿವ ಭೈರತಿ ಬಸವರಾಜ್ ಹೇಳಿಕೆ

 

ದಾವಣಗೆರ.ಜೂ.೨೮; ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಶಾಲೆ ಪುನಾರಂಭ ಮಾಡುವುದು ಸೂಕ್ತವಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚನ್ನಗಿರಿ ತಾಲೂಕಿನ ಕಾಕನೂರು ಗ್ರಾಮದಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಇಂದು ಶಿಕ್ಷಣ ಸಚಿವರ ನೇತೃತ್ವದಲ್ಲಿ ಶಾಲೆಗಳ ಪುನಾರಂಭದ ಸಭೆ ಇದೆ.

ಅಲ್ಲಿ ಶಾಲೆ ಪುನಾರಂಭದ ಬಗ್ಗೆ ನಿರ್ಧಾರವಾಗುತ್ತದೆ.ಮೂರನೇ ಅಲೆ ಮಕ್ಕಳನ್ನು‌ ಬಾಧಿಸುವ ಹೆಚ್ಚು ಎಂಬುದು‌ ತಜ್ಞರ ಅಭಿಪ್ರಾಯ
ಸೋಂಕು‌ ಸಂಪೂರ್ಣವಾಗಿ ಶೂನ್ಯ ಆಗುವವರೆಗೂ ಶಾಲೆ ಆರಂಭಿಸುವುದು‌ ಸೂಕ್ತವಲ್ಲ ಎಂದರು.
ಮಾಜಿ ಸಚಿವ ರಮೇಶ ಜಾರಕಿಹೊಳಿ, ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ರಮೇಶ್ ಅವರು ರಾಜೀನಾಮೆ ನೀಡುವ ಮಾತೇ ಇಲ್ಲ. ಯಾವ ಹಿನ್ನೆಲೆ ಯಲ್ಲಿ ರಾಜೀನಾಮೆ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ
ಮುಂದಿನ ದಿನಗಳಲ್ಲಿ‌ಎಲ್ಲವೂ ತಿಳಿಯಾಗುತ್ತೆ
ಅವರು ನಮ್ಮೊಟ್ಟಿಗೆ ಇರುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!