ಶಾಲೆಗಳಿಲ್ಲದೆ ಮಕ್ಕಳಿಗೆ ಆವರಿಸಿದ ಖಿನ್ನತೆ; ಶಾಸಕ ಮಾಡಾಳು ವಿರೂಪಾಕ್ಷಪ್ಪ ಆತಂಕ
![](https://garudavoice.com/wp-content/uploads/2021/06/IMG_20210628_171114-1024x564.jpg)
ದಾವಣಗೆರೆ. ಜೂ.೨೮; ಶಾಲೆಗಳಿಲ್ಲದೆ ಮಕ್ಕಳು ಖಿನ್ನತೆಗೊಳಗಾಗಿದ್ದಾರೆ
ಈಗಾಗಲೇ ಕೊರೊನಾ ಅಲೆ ಕಡಿಮೆಯಾಗಿದೆ
ಶಾಲೆಗಳನ್ನು ಪುನಾರಂಭಿಸಲು ಇದು ಸಮಯ
ಶಾಲೆಗಳನ್ನು ಪುನಾರಂಭಿಸುವ ಬಗ್ಗೆ ಸರ್ಕಾರ ಸೂಕ್ತ ಆದೇಶ ಹೊರಡಿಸಿಬೇಕು
ದಿನ ಬಿಟ್ಟು ದಿನ ಶಾಲೆ ಆರಂಭಿಸಬೇಕು.
ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಂಡು ಶಾಲೆ ಆರಂಭಿಸಬೇಕು ಎಂದು ಕಾಕನೂರು ಕೊವಿಡ್ ಸೆಂಟರ್ ನಲ್ಲಿ ಮಾತನಾಡಿದ ಅವರು
ಶಾಲೆ ಪುನಾರಂಭದಿಂದ ಮಕ್ಕಳಲ್ಲಿರುವ ಖಿನ್ನತೆ ಹೋಗಲಾಡಿಸಬಹುದು
ಎಷ್ಟೇ ಖರ್ಚಾದರೂ ಶಾಲೆಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು.
ಮಕ್ಕಳಿಗೆ ಉಚಿತವಾಗಿ ಮಾಸ್ಕ್ ವಿತರಿಸಿ ಶಾಲೆ ಆರಂಭಿಸಲು ಸೂಚಿಸಬೇಕೆಂದು ಜಿಲ್ಲಾ ಸಚಿವರಿಗೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮನವಿ ಮಾಡಿದರು.ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳುವದರಿಂದ ಮೂರನೇ ಅಲೆ ತಡೆಗಟ್ಟಬಹುದುಎಲ್ಲರೂ ಕೋವಿಡ್ ನಿಯಮಾವಳಿ ಪಾಲಿಸಿದರೆ ಸೋಂಕಿನ ಮೇಲೆ ನಿಯಂತ್ರಣ ಸಾಧಿಸಿಬಹುದು ಮೂರನೇ ಅಲೆ ಬಗ್ಗೆ ಎಚ್ಚರಿಕೆ ವಹಿಸೋಣ ಎಂದರು.
ಈ ವೇಳೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಹಾಗೂ ಅಧಿಕಾರಿಗಳಿದ್ದರು.