ಹೊನ್ನಾಳಿ ಪತ್ರಿಕಾ ವಿತರಕರ ಬಾಲಕರಿಗೆ ಫುಡ್ ಕಿಟ್ ನೀಡಿದ ಹೆಚ್ ಎ ಉಮಾಪತಿ
ಹೊನ್ನಾಳಿ: ಹೊನ್ನಾಳಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷರಾದ ಎಚ್.ಎ. ಉಮಾಪತಿಯವರ 61ನೇ ವರ್ಷದ ಹುಟ್ಟುಹಬ್ಬ ಮತ್ತು 26ನೇ ವರ್ಷದ ವಿವಾಹ ವಾರ್ಷಿಕೋತ್ಸವದ ನಿಮಿತ್ತ ಹಿರೇಕಲ್ಮಠದಲ್ಲಿ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳವರ ದಿವ್ಯ ಸಾನಿಧ್ಯದಲ್ಲಿ ಸಂಕಷ್ಟದಲ್ಲಿರುವ ಹೊನ್ನಾಳಿ ಪಟ್ಟಣದ ಪತ್ರಿಕಾ ವಿತರಕರಿಗೆ ಫುಡ್ ಕಿಟ್ ಗಳನ್ನು ವಿತರಿಸಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸರಳವಾಗಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವವನ್ನು ಉಮಾಪತಿ ದಂಪತಿಗಳು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ರಂಜಿತ್, ಮಂಜು ಬಣ್ಣಜಿ ಪವನ್ ಡಿ ಪಾಲಾಕ್ಷಪ್ಪ ಪಟ್ಟಣದ ಪತ್ರಕರ್ತರು ಉಪಸ್ಥಿತರಿದ್ದರು