ಮಹಾನಗರ ಪಾಲಿಕೆ ಗುಮಾಸ್ತ ಎನ್. ಶಿವಣ್ಣ ಸಸ್ಪೆಂಡ್

ಮಹಾನಗರ ಪಾಲಿಕೆ ಗುಮಾಸ್ತ ಎನ್. ಶಿವಣ್ಣ ಸಸ್ಪೆಂಡ್

ದಾವಣಗೆರೆ: ಖಾತೆ ವರ್ಗಾವಣೆ ಮಾಡಲು ಲಂಚ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಕಂದಾಯ ಶಾಖೆಯ ಕರ ವಸೂಲಿಗಾರ ಎನ್. ಶಿವಣ್ಣ ಅವರನ್ನು ಸಸ್ಪಂಡ್ ಮಾಡಲಾಗಿದೆ.

ಶಿವಣ್ಣ ಪಾಲಿಕೆಯ ವಲಯ ಕಚೇರಿ 3ರಲ್ಲಿ ಲಂಚ ಸ್ವೀಕರಿಸುತ್ತಿದ್ದ ದೃಶ್ಯವುಳ್ಳ ವೀಡಿಯೋವನ್ನು ಆಯುಕ್ತರ ಮೊಬೈಲ್ ವಾಟ್ಸಾಪ್‌ಗೆ ಕಳುಹಿಸಿ ವೀಡಿಯೋ ಆಧಾರದ ಮೇಲೆ ಕ್ರಮ ಜರುಗಿಸುವಂತೆ ದೂರು ನೀಡಲಾಗಿತ್ತು.

ವೀಡಯೋವನ್ನು ಅವಲೋಕಿಸಿದಾಗ ನೌಕರ 500 ರೂ. ನೋಟು ಎಣಿಸುತ್ತಿರುವುದು ನಂತರ ತಮ್ಮ ಜೇಬಿಗೆ ಇಟ್ಟುಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದ್ದು, ಇದು ಲಂಚ ಪಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಪಾಲಿಕೆ ಆಯುಕ್ತರು ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!