24 ಗಂಟೆಯೊಳಗೆ ಕಳ್ಳತನ ಮಾಡಿದ ಆರೋಪಿಗಳ ಬಂಧನ, 86 ಸಾವಿರ ರೂ. ನಗದು ವಶ

24 ಗಂಟೆಯೊಳಗೆ ಕಳ್ಳತನ ಮಾಡಿದ ಆರೋಪಿಗಳ ಬಂಧನ, 86 ಸಾವಿರ ರೂ. ನಗದು ವಶ

ದಾವಣಗೆರೆ: ದೂರು ದಾಖಲಿಸಿದ 24 ಗಂಟೆಯೊಳಗೆ ಕಳ್ಳತನವಾದ ಪ್ರಕರಣವೊಂದನ್ನು ಅಜಾದ್ ನಗರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ 86.030 ರೂ. ನಗದು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ನಗರದ ಖಾದರ್ ಬಾಷ (26) ಮುಭಾರಕ್ (27) ಬಂಧಿತರು.
ಜುಲೈ 11ರಂದು ರಾತ್ರಿ 12.45ರ ಸಮಾರಿಗೆ ಮಂಡಕ್ಕಿ ಭಟ್ಟಿ 1ನೇ ಕ್ರಾಸ್, ಬಾಲಾಜಿ ಟಾಕೀಸ್ ಹತ್ತಿರದ ಅನ್ವರ್ ಸಾಬ್ ರವರ ಅವಲಕ್ಕಿ ಮೀಲ್‍ನ ಬೀಗವನ್ನು ಹೊಡೆದು ಮೀಲ್‍ನಲ್ಲಿದ್ದ 86,030 ರೂ. ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪಿಎಸ್‍ಐ ಶ್ರೀಮತಿ ಪುಷ್ಪಲತಾ ಮತ್ತು ಸಿಬ್ಬಂದಿಗಳಾದ ಮಂಜುನಾಥ ನಾಯ್ಕ, ತಿಪ್ಪೇಸ್ವಾಮಿ ಬಿ, ಕೃಷ್ಣ ಎನ್, ವೆಂಕಟೇಶ, ನಾಗರಾಜ ಡಿ.ಬಿ, ಹರೀಶ್ ಎಸ್.ಬಿ ಇವರುಗಳನ್ನು ಒಳಗೊಂಡ ತಂಡವು ಪ್ರಕರಣ ಪತ್ತೆ ಹಚ್ಚಿದೆ. ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ತಂಡವನ್ನು ಪ್ರಶಂಸಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!