ಲೋಕಲ್ ಸುದ್ದಿ

ಯುವತಿ ಸಾಯಿಸಿದ ಟೊಮೊಟೊ…!

ದಾವಣಗೆರೆ (ನ್ಯಾಮತಿ) : ವಿಘ್ನ ನಿವಾರಕ ವಾಹನ ಇಲಿಯನ್ನು ಗಣಪತಿ ಹಬ್ಬದಲ್ಲಿ ಪೂಜೆ ಮಾಡುವುದು ವಾಡಿಕೆ, ಆದರೆ ಇದೇ ಇಲಿ ಸಾಯಿಸಲು ಇಟ್ಟಿದ್ದ ಟೊಮೊಟೊ ಹಣ ತಿಂದು ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ನ್ಯಾಮತಿ ಪಟ್ಟಣದ ಎ. ಕೆ. ಕಾಲೋನಿಯ ಹಾಲೇಶಪ್ಪ ಎಂಬುವರ ಮನೆಯಲ್ಲಿ ನಡೆದಿದೆ.

ಇದೇ ಗ್ರಾಮದ ಎಚ್.ಐಶ್ವರ್ಯ (21) ಮೃತ ಯುವತಿಯಾಗಿದ್ದು, ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ಮೊದಲ ವರ್ಷದ ವಿದ್ಯಾರ್ಥಿನಿಯಾಗಿ ಓದುತ್ತಿದ್ದರು. ಹೀಗಿರುವಾಗ ಮನೆಯಲ್ಲಿ ಯಾವಾಗಲೂ ಇಲಿಗಳ ಕಾಟ ಹೆಚ್ಚಿತ್ತು.. ಮನೆಯಲ್ಲಿಟ್ಟಿದ್ದ ಸಾಮಾನುಗಳನ್ನೆಲ್ಲ ಅದು ತಿಂದು ಹಾಳು ಮಾಡುತ್ತಿತ್ತು. ಇದರಿಂದ ಬೇಸತ್ತಿದ್ದ ತಂದೆ ಹಾಲೇಶಪ್ಪ ಇಲಿಗಳನ್ನು ಸಾಯಿಸಲು ಪಾಷಾಣ ತಂದಿದ್ದಾರೆ.. ಸಾಮಾನ್ಯವಾಗಿ ಇಲಿಗಳಿಗೆ ಟೊಮೋಟೊ ಕಂಡ್ರೆ ಜಾಸ್ತಿ ರುಚಿ ಇದ್ದು, ಅವುಗಳನ್ನು ಕಚ್ಚಿ ತಿನ್ನುವುದರಿಂದ ಹಾಲೇಶಪ್ಪ ಟೊಮೋಟೊ ಹಣ್ಣಿಗೆ ವಿಷಪ್ರಾಶನ ಮಾಡಿದ್ದಾರೆ. ಇಲಿಗಳ ಕಾಟದಿಂದ ಬೇಸತ್ತಿದ್ದ ಇವರ ಮನೆಯವರು ಇಲಿ ಕೊಲ್ಲಬೇಕೆಂಬ ಉದ್ದೇಶದಿಂದ ಇಲಿ ಬರುವ ಜಾಗಕ್ಕೆ ಟೊಮೇಟೊ ಇಟ್ಟಿದ್ದಾರೆ. ಹೀಗಿರುವಾಗ ವಿಷ ಸವರಿದ್ದ ಟೊಮೊಟೊವನ್ನು ಐಶ್ವರ್ಯ ತಿಂದಿದ್ದಾರೆ.

ಆದರೆ ಅವರು ಟೊಮೊಟಟೊ ಹಣ್ಣು ತಿಂದಿರುವುದು ಯಾರಿಗೆ ಗೊತ್ತಿರಲಿಲ್ಲ. ನಂತರ ಐಶ್ವರ್ಯಗೆ ಅತಿಯಾದ ವಾಂತಿಯಾಗಿದೆ. ಆಸ್ಪತ್ರೆ ದಾಖಲಿಸಿದ್ದ ವೇಳೆ ಆಸ್ಪತ್ರೆಯಲ್ಲಿ ಹೊಟ್ಟೆಯಲ್ಲಿ ವಿಷ ಇರುವುದನ್ನು ಪತ್ತೆ ಹಚ್ಚಿದ್ದ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಐಶ್ವರ್ಯ ಶುಕ್ರವಾರ ಮತ ಪಟ್ಟಿದ್ದಾರೆ. ಈ ಬಗ್ಗೆ ನ್ಯಾಮತಿ ಠಾಣೆಯಲ್ಲಿ ತಂದೆ ಹಾಲೇಶಪ್ಪ ಪ್ರಕರಣ ದಾಖಲಾಗಿದೆ. ಒಟ್ಟಾರೆ ಇಲಿ ಸಾಯಿಸಲು ಇಟ್ಟಿದ್ದ ಟೊಮೊಟೊ ಹಣ್ಣು ಒಂದು ಜೀವವನ್ನೇ ಬಲಿ ತೆಗೆದುಕೊಂಡಿದ್ದು, ಮನೆಯಲ್ಲಿ ನೀರವ ,ಮೌನ ಆವರಿಸಿದೆ.

Click to comment

Leave a Reply

Your email address will not be published. Required fields are marked *

Most Popular

To Top