ಖಾಸಗಿ ಬಸ್ ಪಲ್ಟಿ ಓರ್ವ ಗಂಭೀರ.! ಚಾಲಕನ ವೇಗಕ್ಕೆ ಪ್ರಯಾಣಿಕರ ಪರದಾಟ

ಖಾಸಗಿ ಬಸ್ ಪಲ್ಟಿ ಓರ್ವ ಗಂಭೀರ.! ಚಾಲಕನ ವೇಗಕ್ಕೆ ಪ್ರಯಾಣಿಕರ ಪರದಾಟ

ದಾವಣಗೆರೆ: ದಾವಣಗೆರೆ ಸಮೀಪ ಬೇತೂರು ರಸ್ತೆಯ ರಾಜಕಾಲುವೆ ಬಳಿ ಖಾಸಗಿ ಬಸ್ ಪಲ್ಟಿಯಾದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಚಳ್ಳಕೆರೆ ಯಿಂದ ಶಿವಮೊಗ್ಗ ನಡುವೆ ಚಲಿಸುವ ಲಕ್ಷ್ಮಿ ಎಕ್ಸ್‌ಪ್ರೆಸ್‌ ಎಂಬ ಬಸ್ ಪಲ್ಟಿಯಾಗಿದ್ದು, 10 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು ಓರ್ವನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಗಾಯಗಳುಗಳನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಮುಂಜಾನೆ ನಗರದ ಹೊರವಲಯದ ಬೇತೂರು ರಾಜಕಾಲುವೆ ಬಳಿ ಲಕ್ಷ್ಮೀ ಬಸ್ ಚಾಲಕ ಅತೀ ವೇಗದ, ಅಜಾಗರೂಕತೆಯಿಂದ ಬಸ್ ಚಾಲನೆ ಮಾಡಿದ್ದರಿಂದ ಪಲ್ಟಿಯಾಗಿದೆ ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ದಾವಣಗೆರೆ ಹಾಗೂ ಜಗಳೂರು ಮಧ್ಯೆ ಖಾಸಗಿ ಬಸ್ ಗಳ ಚಾಲನೆಯಲ್ಲಿ ಅಜಾಗರೂಕತೆಯಿಂದ ಕೂಡಿದೆ ಎಂದು ಹಲವಾರು ದೂರುಗಳು ಬಂದಿದ್ದರೂ ಸಾರಿಗೆ ಇಲಾಖೆ ಅಧಿಕಾರಿಗಳು ಇದಕ್ಕೆ ಸೋಪ್ಪು‌ ಹಾಕದೆ ಇರುವುದು ವಿಷಾದನೀಯ ಎನ್ನಲಾಗಿದ್ದು, ಭಾರಿ ಅನಾಹುತಕ್ಕೆ ಕಾರಣವಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ ಎನ್ನುತ್ತಾರೆ ಬಸ್ ನಲ್ಲಿ ಸಂಚರಿಸುವ ಪ್ರಯಾಣಿಕರು.

Leave a Reply

Your email address will not be published. Required fields are marked *

error: Content is protected !!