ಫೆಬ್ರವರಿ 28 ರಂದು ಕೃಷಿ ಅರಣ್ಯ ಕಾರ್ಯಾಗಾರ
![](https://garudavoice.com/wp-content/uploads/2023/02/IMG_20230224_224802.jpg)
ಫೆಬ್ರವರಿ 28 ರಂದು ಕೃಷಿ ಅರಣ್ಯ ಕಾರ್ಯಾಗಾರ
ದಾವಣಗೆರೆ : ಪ್ರಾದೇಶಿಕ ಹಾಗೂ ಸಾಮಾಜಿಕ ಅರಣ್ಯ ವಿಭಾಗ ಮತ್ತು ಕೃಷಿ ಅರಣ್ಯ ರೈತರ ಹಾಗೂ ಬೆಂಗಳೂರು ತಂತ್ರಜ್ಞರ ಸಂಸ್ಥೆ (ಐ.ಎ.ಎಫ್.ಟಿ) ವನವಿಕಾಸ, ಇವರ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ 28 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಕುವೆಂಪು ಭವನದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ 2023 ನೇ ಸಾಲಿನ ಕೃಷಿ ಅರಣ್ಯ ಕಾರ್ಯಾಗಾರ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಕಾಂಪಾ) ಹಾಗೂ ಬಳ್ಳಾರಿ ವೃತ್ತ ನೋಡಲ್ ಅಧಿಕಾರಿಗಳಾದ ಪ್ರಭಾಷ್ ಚಂದ್ರ ರೇ ಉದ್ಘಾಟಿಸುವರು. ಬಳ್ಳಾರಿ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಟಿ ಹೀರಾಲಾಲ್ ಅಧ್ಯಕ್ಷತೆ ವಹಿಸುವರು.
ವಿಶೇಷ ಆಹ್ವಾನಿತರಾಗಿ ಬೆಂಗಳೂರು ಅರಣ್ಯಭವನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ(ಅಭಿವೃದ್ಧಿ) ಬ್ರಿಜೇಶ್ಕುಮಾರ್ ದೀಕ್ಷಿತ್ ಮತ್ತು ಬೆಂಗಳೂರು ಸಾಮಾಜಿಕ ಅರಣ್ಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಜಿ.ಎಸ್ ಯಾದವ್ ಭಾಗವಹಿಸುವರು.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಎ.ಚನ್ನಪ್ಪ, ನಿವೃತ್ತ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್ ಮೂರ್ತಿ, ನಿವೃತ್ತ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಬೆಂಗಳೂರು ಕೃಷಿ ಅರಣ್ಯ ರೈತರ ತಂತ್ರಜ್ಞಾನ ಸಂಸ್ಥೆ ಕಾರ್ಯದರ್ಶಿ ಶಿವಾನಂದಮೂರ್ತಿ, ನಿವೃತ್ತ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಬೆಂಗಳೂರು ಕೃಷಿ ಅರಣ್ಯ ರೈತರ ತಂತ್ರಜ್ಞಾನ ಸಂಸ್ಥೆ ಸದಸ್ಯರಾದ ಅಣ್ಣಯ್ಯ ಎಂ.ಎಂ ಭಾಗವಹಿಸಲಿದ್ದಾರೆ ಎಂದು ದಾವಣಗೆರೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ