ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ: ಯುವಕ ಸಾವು
![](https://garudavoice.com/wp-content/uploads/2023/03/IMG-20230309-WA0005.jpg)
ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ: ಯುವಕ ಸಾವು
ದಾವಣಗೆರೆ: ಇಲ್ಲಿನ ತರಳಬಾಳು ಶಾಲೆ ಬಳಿ ಹದಡಿ ರಸ್ತೆಯಲ್ಲಿ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿಯಾಗಿ ಯುವಕನೊಬ್ಬ ಮೃತಪಟ್ಟಿದ್ದಾರೆ. ಮತ್ತೊಬ್ಬನ ಕಾಲಿಗೆ ಗಾಯವಾಗಿದೆ.
ಕೆಟಿಜೆ ನಗರದ ಹಾಲೇಶ್ ಅವರ ಮಗ ಅಭಿಷೇಕ್ (19) ಮೃತಪಟ್ಟವರು. ಹನುಮಂತ (16) ಗಾಯಗೊಂಡವರು. ಹೋಳಿ ಹಬ್ಬದ ಪ್ರಯುಕ್ತ ಬಣ್ಣ ಹಾಕಿಕೊಂಡು ಬೈಕಲ್ಲಿ ತಿರುಗಾಡುತ್ತಿದ್ದಾಗ ಈ ಅಪಘಾತ ಉಂಟಾಗಿದೆ. ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.