‘ಡಿಕೆ ಮೇಕೆದಾಟು ದಾಟಲಿಲ್ಲ, ಮೇಕೆಯಾದರೂ ದಾಟಲಿ’ ಟ್ವಿಟರ್ ನಲ್ಲಿ ಬಿಜೆಪಿ ವ್ಯಂಗ್ಯ
ಬೆಂಗಳೂರು: ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ವಿರುದ್ಧ ಕಮಲ ಪಾಳಯ ತೀವ್ರ ಕಿಡಿಕಾರಿದೆ.
ಈ ನಡುವೆ, ಪಾದಯಾತ್ರೆಗೂ ಮುನ್ನ ಕಾವೇರಿಗೆ ಪೂಜೆ ಸಲ್ಲಿಸಿದ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜಾರಿಬಿದ್ದ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ನಗೆಪಾಟಲಿಗೆ ಗುರಿಯಾಗಿದ್ದು, ನೆಟ್ಟಿಗರು ಬೆಳ್ಳಂಬೆಳಿಗ್ಗೆಯೇ ಬಂಡೆ ವಾಲುಡುತ್ತಿದೆಯಲ್ಲ ಎಂಬ ಹತ್ತಾರು ರೀತಿಯ ವ್ಯಂಗ್ಯಗಳನ್ನು ಕಮೆಂಟ್ ಮಾಡಿದ್ದಾರೆ.
ಡಿಕೆ ದಾಟಲಿಲ್ಲ, ಮೇಕೆಯಾದರೂ ದಾಟಲಿ!#ಸುಳ್ಳಿನಜಾತ್ರೆ pic.twitter.com/xibQDTIyWw
— BJP Karnataka (@BJP4Karnataka) January 9, 2022
ಈ ಕುರಿತ ವೀಡಿಯೋವನ್ನು ಬಿಜೆಪಿ ವೈರಲ್ ಮಾಡಿದೆ. ‘ಡಿಕೆ ಮೇಕೆದಾಟು ದಾಟಲಿಲ್ಲ, ಮೇಕೆಯಾದರೂ ದಾಟಲಿ’ ಎಂದು ವ್ಯಂಗ್ಯವಾಗಿ ಬಿಜೆಪಿ ಟ್ವೀಟ್ ಮಾಡಿದೆ.