ಸರ್ಕಾರದ ಲಾಂಛನ ಹಾಕದೆ ಸರ್ಕಾರಿ ಕಾರ್ಯಕ್ರಮ ಮಾಡಿದ ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ
![](https://garudavoice.com/wp-content/uploads/2023/03/IMG-20230317-WA0002-1024x576.jpg)
ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ
ಹೊನ್ನಾಳಿ: ಪಟ್ಚಣದಲ್ಲಿ ಇಂದು ನಡೆದ 1933 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಲಾಂಛನವೇ ಇರಲಿಲ್ಲ. ಬದಲಾಗಿ ಬಿಜೆಪಿ ಬಾವುಟಗಳ ಹಾರಾಟ ಜೋರಾಗಿತ್ತು. ಕಾರ್ಯಕರ್ತರ ಮೋಜು ಮಸ್ತಿ ಇತ್ತು.
ಸರ್ಕಾರಿ ಅನುದಾನದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದ ಶಾಸಕ ರೇಣುಕಾಚಾರ್ಯ, ಸರ್ಕಾರದ ಲಾಂಛನವನ್ನೆ ಮರೆತು ಬಿಟ್ಟಿದ್ದರು. ಶಾಸಕ ರೇಣುಕಾಚಾರ್ಯ.
ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಯಡಿಯೂರಪ್ಪ ಸೇರಿದಂತೆ ಸಚಿವರುಗಳು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗಿಯಾಗಿದ್ದರು. ಆದರೆ, ಮುಖ್ಯಮಂತ್ರಿಗಳು, ಲ್ಲಾಧಿಕಾರಿ, ಎಸ್ಪಿ ಮತ್ತು ಸಿಇಓ ಲಾಂಛನ ಮಿಸ್ ಆಗಿದ್ದನ್ನು ಗಮನಿಸಲೇ ಇಲ್ಲ.
ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಸಚಿವರಾದ ಗೋವಿಂದ್ ಕಾರಜೋಳ, ಬೈರತಿ ಬಸವರಾಜ್, ಸಂಸದ ಜಿ ಎಂ ಸಿದ್ದೇಶ್ವರ ಭಾವಚಿತ್ರ ಪ್ರದರ್ಶನ ನಡೆಯಿತು. ಬಿಜೆಪಿ ಬಾವುಟಗಳು ರಾರಾಜಿಸಿದವು. ರಸ ಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.