Dasara; ದಸರಾ ಕ್ರೀಡಾ ಜ್ಯೋತಿ ಬೆಳಗಿಸಿದ ಡಾ.ಎಂ.ಪಿ.ವರ್ಷ

ಮೈಸೂರು. ಅ.11: ವಿಶ್ವವಿಖ್ಯಾತ 413ನೇ ಮೈಸೂರು ದಸರಾ (dasara) ಪ್ರಯುಕ್ತ ದಸರಾ (ಕ್ರೀಡಾ) ಜ್ಯೋತಿ ಬುಧವಾರ ಬೆಳಿಗ್ಗೆ 9.30 ಕ್ಕೆ ಚಾಮುಂಡಿದೇವಿಯ ಸನ್ನಿಧಾನದಲ್ಲಿ ಬೆಳಗಿಸಲಾಯಿತು.

ಮೈಸೂರಿನ ಡಾ.ಎಂ.ಪಿ.ವರ್ಷ ಅವರು ದಸರಾ (ಕ್ರೀಡಾ) ಜ್ಯೋತಿ ಬೆಳಗಿಸುವ ಮೂಲಕ ಚಾಮುಂಡೇಶ್ವರಿಯ ಕೃಪೆಗೆ ಪಾತ್ರರಾದರು. ಇವರು ಸತತವಾಗಿ 13ನೇ ವರ್ಷ (ಕ್ರೀಡಾ) ಜ್ಯೋತಿ ಬೆಳಗಿಸಿರುವುದು ವಿಶೇಷ.

Siddaramaiah; ಸಿದ್ದರಾಮಯ್ಯ ಮಾಜಿ ಪ್ರಧಾನಿ ದೇವೇಗೌಡರ ಅನಿರೀಕ್ಷಿತ ಭೇಟಿ

ಈ ಜ್ಯೋತಿಯು ಮೈಸೂರಿನ ವಿವಿಧ ಪ್ರದೇಶಗಳಲ್ಲಿ ಸುಮಾರು 21 ಕಿ.ಮೀ ಸಂಚರಿಸಿ ಸಂಜೆ 4.30 ಚಾಮುಂಡಿ ವಿಹಾರ ಕ್ರೀಡಾಂಗಣ ತಲುಪಲಿದೆ.

ಈ ವರ್ಷವೂ ದಸರಾ ಕ್ರೀಡಾಜ್ಯೋತಿಯ ಜವಾಬ್ದಾರಿ ಮತ್ತೆ ನನಗೆ ಬಂದಿದ್ದು, ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ಸತತವಾಗಿ 13 ನೇ ವರ್ಷ ಚಾಮುಂಡೇಶ್ವರಿಯ ಗರ್ಭಗುಡಿಯಿಂದ ಕ್ರೀಡಾಜ್ಯೋತಿಯನ್ನು ಕೊಂಡೊಯ್ಯುವ ಜವಾಬ್ದಾರಿ ನನ್ನದಾಗಿದೆ ಎಂದು ಡಾ.ಎಂ.ಪಿ.ವರ್ಷ ಅವರು ಹರ್ಷ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!