ಕಾಸರಗೋಡು ಬಿಜೆಪಿಯ ಸ್ಥಳೀಯ ನಾಯಕರನ್ನು ಕಡೆಗಣಿಸಿ, ಟಿಕೆಟ್ ಗಿಟ್ಟಿಸಿಕೊಂಡ ಲೋಕಸಭಾ ಅಭ್ಯರ್ಥಿ ವಿರುದ್ಧ ಭಿನ್ನಮತ ಸ್ಫೋಟ
![](https://garudavoice.com/wp-content/uploads/2024/03/bjp.jpg)
ಕಾಸರಗೋಡು : ಕಾಸರಗೋಡಿನ ಬಿಜೆಪಿಯಲ್ಲಿ ಮತ್ತೆ ಆಂತರಿಕ ಗುದ್ದಾಟ ಆರಂಭವಾಗಿದೆ. ಸ್ಥಳೀಯ ನಾಯಕರನ್ನು ಕಡೆಗಣಿಸಿ, ತನ್ನ ಬೆಂಗಳೂರಿನ ಪ್ರಭಾವ ಬಳಸಿ ಲೋಕಸಭಾ ಚುನಾವಣೆಗೆ ಎನ್.ಡಿ.ಎ. ಟಿಕೆಟ್ ಗಿಟ್ಟಿಸಿಕೊಂಡ ಅಶ್ವಿನಿ ವಿರುದ್ಧವೇ ಈಗ ಭಿನ್ನಮತ ಸ್ಫೋಟಗೊಂಡಿದೆ.
ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಸೈಲೆಂಟ್ ಆಗಿದ್ದ ಕೆಲ ಬಿಜೆಪಿ ಜಿಲ್ಲಾ ಮಟ್ಟದ ನಾಯಕರು ಹಾಗೂ ರಾಜ್ಯದ ಪದಾಧಿಕಾರಿಗಳು ಪಕ್ಷದ ಹಿರಿಯರಿಗೆ ಈ ಪತ್ರ ಬರೆದಿರುವುದು ಬಹಿರಂಗವಾಗಿದೆ. ಈ ಪತ್ರದಲ್ಲಿ ಅಶ್ವಿನಿಯವ ಅಸಮರ್ಥತೆಯನ್ನೂ ಉಲ್ಲೇಖಿಸಲಾಗಿದೆ ಎಂದು ಮಾಹಿತಿ ಲಭಿಸಿದೆ.