ಬಿಲ್ಡರ್ ರೋಹನ್ ಮಾಲೀಕತ್ವದ ಕಂಪನಿಗೆ ವಂಚನೆ; ಮುಂಬೈ ಉದ್ಯಮಿ ‘ಶೆಟ್ಟಿ’ ಬಂಧನ.! 

ಬಿಲ್ಡರ್ ರೋಹನ್ ಮಾಲೀಕತ್ವದ ಕಂಪನಿಗೆ ವಂಚನೆ; ಮುಂಬೈ ಉದ್ಯಮಿ ‘ಶೆಟ್ಟಿ’ ಬಂಧನ.! 

 ಮಂಗಳೂರು; ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಉದ್ಯಮಿ ಕಳತ್ತೂರು ವಿಶ್ವನಾಥ ಶೆಟ್ಟಿಯನ್ನು ಮಂಗಳೂರು ಸೈಬರ್ ಕ್ರೈಂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಎರಡು ದಿನಗಳ ಹಿಂದೆ ಮುಂಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮಂಗಳೂರಿನ ಹೆಸರಾಂತ ಕಟ್ಟಡ ನಿರ್ಮಾಣ ಸಂಸ್ಥೆ “ರೋಹನ್ ಕಾರ್ಪೊರೇಷನ್” ಆಡಳಿತ ನಿರ್ದೇಶಕರಾದ ರೋಹನ್ ಮುಂತೇರೊ ಮತ್ತು ತೊಕ್ಕೊಟ್ಟಿನ ಹರ್ಷ ಫೈನಾನ್ಸ್ ಮಾಲೀಕ ಹರೀಶ್ ಎಂಬುವವರಿಗೆ, 1.75 ಕೋಟಿ ರೂಗಳನ್ನು ವಿಶ್ವನಾಥ್ ಶೆಟ್ಟಿ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಟ್ಟಡ ನಿರ್ಮಾಣ ಸಂಸ್ಥೆಗೆ 300 ಕೋಟಿ ಸಾಲ ತೆಗೆಸಿ ಕೊಡುವುದಾಗಿ ನಂಬಿಸಿ ವಿಶ್ವನಾಥ್ ಶೆಟ್ಟಿ ಮತ್ತು ಮುಂಬೈನ ಕದಂ ಎಂಬವರು ಸೇರಿ ರೋಹನ್ ಮತ್ತು ಹರೀಶ್ ರವರಿಂದ 1.75 ಕೋಟಿ ರೂಗಳನ್ನು ಅಡ್ವಾನ್ಸ್ ಮುಕ್ತವಾಗಿ ಪಡೆದಿದ್ದರು. ನಂತರ ಹಣಕಾಸು ನೆರವು ಒದಗಿಸದೆ ವಂಚನೆ ಮಾಡಿದ್ದಾರೆ, ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!