ಹೊನ್ನಾಳಿ: ಶಿವಮೊಗ್ಗದಲ್ಲಿ ದಾವಣಗೆರೆ ಬಾರ್ಡರ್ ನಲ್ಲಿ ಮತ್ತೆ ರೌಡಿಸಂ ಸದ್ದು ಮಾಡಿದೆ.

ಹೊನ್ನಾಳಿ: ಶಿವಮೊಗ್ಗದಲ್ಲಿ ದಾವಣಗೆರೆ ಬಾರ್ಡರ್ ನಲ್ಲಿ ಮತ್ತೆ ರೌಡಿಸಂ ಸದ್ದು ಮಾಡಿದೆ.

ಹೊನ್ನಾಳಿ: ನ್ಯಾಮತಿ ತಾಲ್ಲೂಕಿನ ಚೀಲೂರು ಗ್ರಾಮದ ಬಳಿಯ ಗೋವಿನ ಕೋವಿಯ ಬಳಿಯಲ್ಲಿ ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲೆ ಬೀಕರವಾಗಿ ದಾಳಿ ನಡೆದಿದೆ. ಈ ಪೈಕಿ ಆಂಜನೇಯ ಸಾವನ್ನಪ್ಪಿದ್ದು, ಮಧು ಸ್ತಿತಿ ಗಂಭೀರವಿದೆ ಎನ್ನಲಾಗಿದೆ.
ಘಟನೆ ನಡೆದಿದ್ದೇನು?
ಇಂದು ಮಧು ಮತ್ತು ಆಂಜನೇಯ, ಹಂದಿ ಅಣ್ಣಿ ಕೊಲೆ ಕೇಸಿನಲ್ಲಿ ಕೋರ್ಟ್​ಗೆ ಅಟೆಂಡ್ ಆಗಿ ವಾಪಸ್​ ಬರುತ್ತಿದ್ದರು. ಬೈಕ್​ ನಲ್ಲಿ ಬರುತ್ತಿದ್ದ ಇವರಿಬ್ಬರನ್ನ ಸ್ಕಾರ್ಪಿಯೋ ಗಾಡಿಯೊಂದು ಫಾಲೋ ಮಾಡಿದೆ. ಅಲ್ಲದೆ ಗೋವಿನ ಕೋವಿ ಬಳಿ ಮಧು ಮತ್ತು ಆಂಜನೇಯ ನ ಮೇಲೆ ಮಾರಣಾಂತಿಕ ದಾಳಿ ನಡೆಸಿದೆ. ಈ ವೇಳೆ ಆಂಜನೇಯ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ಹಲ್ಲೆ ಮಾಡಿದ ಗ್ಯಾಂಗ್​ನಲ್ಲಿ ನಾಲ್ಕೈದು ಮಂದಿ ಇದ್ದರು ಎಂದು ಹೇಳಲಾಗಿದೆ. ಇನ್ನೂ ಸ್ಥಳದಲ್ಲಿ ಒಂದು ಸ್ಕಾರ್ಪಿಯೋ ಪತ್ತೆಯಾಗಿದ್ದು ಸ್ಥಳೀಯ ಗ್ರಾಮಸ್ಥರು ಘಟನೆ ಕಂಡು ಭಯಭೀತರಾಗಿದ್ದಾರೆ.
ಸ್ಥಳಕ್ಕೆ ದಾವಣಗೆರೆ ಹಾಗೂ ಶಿವಮೊಗ್ಗ ಪೋಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ದಾಳಿ ಮಾಡಿದವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!