ಕುಂಚ ಬ್ರಹ್ಮ ಖ್ಯಾತಿಯ ಪ್ರೋ.ಬಿ.ಆರ್.ಕೊರ್ತಿ ನಿಧನ : ಕಲಾವಿದರಿಂದ ತೀವ್ರ ಸಂತಾಪ

ದಾವಣಗೆರೆ: ದಾವಣಗೆರೆಯ ಕುಂಚ ಬ್ರಹ್ಮ ಎಂದೇ ಖ್ಯಾತರಾಗಿದ್ದ ಪ್ರೊ.ಬಿ.ಆರ್.ಕೊರ್ತಿ ಅವರು ನಿಧನಕ್ಕೆ ಯಕ್ಷಗಾನ ಕಲಾವಿದ ಹಾಗೂ ಕನ್ನಡಪರ ಸಂಘಟಕ ಕೆ.ರಾಘವೇಂದ್ರ ನಾಯರಿ ತೀವ್ರ ಸಂತಾಪ‌ ಸೂಚಿಸಿದ್ದಾರೆ.

ಲಲಿತಕಲಾ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸಿ‌, ನಿವೃತ್ತಿಗೊಂಡಿದ್ದ 77 ವರ್ಷದ ಕೊರ್ತಿ ಅವರು, ಮೈಸೂರಿನ ದಸರಾ ಸೇರಿದಂರೆ ಹಲವೆಡೆ ಯಕ್ಷಗಾನ‌ ಪ್ರದರ್ಶನ ನೀಡಿ, ಹಲವು ಪ್ರಶಸ್ತಿಗಳನ್ನು ಪಡೆದಿದ್ದರು.

ಹೃದಯ ಸಂಬಂಧಿ ಕಾಯಿಲೆಯಿಂದ ಇಂದು ನಿಧನರಾಗಿರುವ ಕೊರ್ತಿ ಅವರು, ಪತ್ನಿ‌ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಇವರ ಅಗಲುವಿಕೆ ಕುಂಚ ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ನಾಯರಿ ವಿಷಾದ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!